ರಂಗಸ್ಥಲಂ ಅತ್ಯುತ್ತಮ ಚಿತ್ರ; ಬಾಹುಬಲಿ ನಿರ್ದೇಶಕ ರಾಜಮೌಳಿ

ತೆಲುಗು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸುತ್ತಿರುವ ಚಿತ್ರ ರಂಗಸ್ಥಲಂ ಚಿತ್ರವನ್ನು ಬಾಹುಬಲಿ ನಿರ್ದೇಶಕ ರಾಜಮೌಳಿಯವರು ಹಾಡಿಹೊಗಳಿದ್ದಾರೆ...
ಬಾಹುಬಲಿ ನಿರ್ದೇಶಕ ರಾಜಮೌಳಿ
ಬಾಹುಬಲಿ ನಿರ್ದೇಶಕ ರಾಜಮೌಳಿ
ಚೆನ್ನೈ: ತೆಲುಗು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸುತ್ತಿರುವ ಚಿತ್ರ ರಂಗಸ್ಥಲಂ ಚಿತ್ರವನ್ನು ಬಾಹುಬಲಿ ನಿರ್ದೇಶಕ ರಾಜಮೌಳಿಯವರು ಹಾಡಿಹೊಗಳಿದ್ದಾರೆ. 
ಚಿತ್ರ ವೀಕ್ಷಣೆ ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ರಂಗಸ್ಥಲಂ ಅತ್ಯುತ್ತಮ ಚಿತ್ರ ಎಂದು ಹೇಳಿದ್ದಾರೆ. 
ರಂಗಸ್ಥಲಂ ಚಿತ್ರದ ಬಗ್ಗೆ ಹೇಳಲು ಸಾಕಷ್ಟು ವಿಚಾರಗಳಿವೆ. ಆದರೆ, ಚಿಟ್ಟಿಬಾಬುಗಾಗಿ ಸುಕುಮಾರ್ ಅವರು ಬರೆದಿರುವ ಪಾತ್ರ ಮತ್ತು ಆ ಪಾತ್ರದಲ್ಲಿ ನಟ ರಾಮ್ ಚರಣ್ ತೇಜ ಅವರ ನಟನೆ ಎಲ್ಲದರ ಮೇಲೂ ಗ್ರಹಣ ಮೂಡಿದಂತೆ ಮಾಡುತ್ತದೆ. ಪ್ರತೀಯೊಂದು ಸೂಕ್ಷ್ಮವಾದ ಪಾತ್ರಗಳು ನೋಡಬೇಕೆಂದೆನಿಸುತ್ತದೆ. ಚಿತ್ರ ಅತ್ಯುತ್ತಮವಾಗಿದೆ ಎಂದು ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಪಾತ್ರಗಳಲ್ಲಿ ರಾಮ್ ಚರಣ್ ತೇಜಗೆ ಸಮವಾಗಿ ನಿಲ್ಲುವ ಏಕೈಕ ವ್ಯಕ್ತಿಯೆಂದರೆ ಜಗಪತಿ ಬಾಬು. ನಿಧಾನಗತಿಯಲ್ಲಿ ಸಂಭಾಷಣೆಗಳನ್ನು ಹೇಳುವುದು ಹಾಗೂ ಅವರ ಅಭಿನಯವಂತೂ ಅದ್ಭುತ. ಮೈತ್ರಿ, ಸುಕುಮಾರ್ ಹಾಗೂ ರಂಗಸ್ಥಲಂ ಚಿತ್ರ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com