'ದಳಪತಿ'ಯಿಂದಾಗಿ ಸಮಯದ ಮಹತ್ವ ತಿಳಿಯಿತು: ನಿರ್ದೇಶಕ ಪ್ರಶಾಂತ್ ರಾಜ್

ಈ ವಾರ ದಳಪತಿ ಬಿಡುಗಡೆಯಾಗುವುದರಿಂದ ಚಿತ್ರ ಯಶಸ್ಸು ಪಡೆಯಲು ನಿರ್ದೇಶಕ ಪ್ರಶಾಂತ್ ರಾಜ್ ...
ದಳಪತಿ ಚಿತ್ರದ ದೃಶ್ಯ
ದಳಪತಿ ಚಿತ್ರದ ದೃಶ್ಯ
Updated on

ಈ ವಾರ ದಳಪತಿ ಬಿಡುಗಡೆಯಾಗುವುದರಿಂದ ಚಿತ್ರ ಯಶಸ್ಸು ಪಡೆಯಲು ನಿರ್ದೇಶಕ ಪ್ರಶಾಂತ್ ರಾಜ್ ಶಿರಡಿಯ ಸಾಯಿಬಾಬ ದೇವರ ಆಶೀರ್ವಾದ ಪಡೆದು ಬಂದಿದ್ದಾರೆ. ನನ್ನ ಎಲ್ಲಾ ಚಿತ್ರಗಳು ಬಿಡುಗಡೆಯಾಗುವ ಮೊದಲು ಶಿರಡಿ ಸಾಯಿಬಾಬಾರ ಆಶೀರ್ವಾದ ಪಡೆದು ಬರುತ್ತೇನೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರ ಬಿಡುಗಡೆಯಾಗಲು ಸುದೀರ್ಘ ವರ್ಷವಾಗಿರುವ ಬಗ್ಗೆ ನಿರ್ದೇಶಕರು ಹೀಗೆ ಹೇಳುತ್ತಾರೆ: ಸಿನಿಮಾವಾಗಿ ದಳಪತಿಗೆ ಯಾವುದೇ ಅಡ್ಡಿ ಬರಲಿಲ್ಲ. ಚಿತ್ರ ನಮ್ಮ ಸಮಯವನ್ನು ಪರೀಕ್ಷೆ ಮಾಡಿದೆಯಷ್ಟೆ. ಈ ಚಿತ್ರದ ಮೂಲಕ ನಮಗೆ ದಿನ ಮತ್ತು ಶೆಡ್ಯೂಲ್ ಗಳ ಮಹತ್ವ ತಿಳಿಯಿತು ಎನ್ನುತ್ತಾರೆ.

ಪ್ರಶಾಂತ್ ಅವರ ಹಿಂದಿನ ಚಿತ್ರಗಳು ಯಶಸ್ಸು ಕಂಡಿದ್ದು , ಈ ಚಿತ್ರ ಕೂಡ ಯಶಸ್ಸು ಆಗುವ ವಿಶ್ವಾಸ ನಿರ್ದೇಶಕರಿದ್ದಾರೆ. ದಳಪತಿಯಲ್ಲಿ ಪ್ರೇಕ್ಷಕರು ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಬರಬಹುದು. ಇದು ಪ್ರೀತಿಯ ಕಥೆಯಾದರೂ ಕೂಡ ವಿಭಿನ್ನವಾಗಿದೆ ಎನ್ನುತ್ತಾರೆ ನಿರ್ದೇಶಕರು.

ಪ್ರೇಮ್, ಕೃತಿ ಕರಬಂಧ ನಟನೆಯ ದಳಪತಿಗೆ ಚರಣ್ ರಾಜ್ ಅವರ ಸಂಗೀತ ಮತ್ತು ಗಿರೀಶ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com