ಚುನಾವಣೆಯ ಹೊಸ್ತಿಲಲ್ಲಿ ನಾಳೆ 3 ರಾಜಕೀಯ ವಿಷಯ ಆಧಾರಿತ ಚಿತ್ರಗಳು ತೆರೆಗೆ

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣೆಯ ಬಿಸಿ ಕನ್ನಡ ...
ಧ್ವಜ ಚಿತ್ರದ ದೃಶ್ಯ
ಧ್ವಜ ಚಿತ್ರದ ದೃಶ್ಯ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣೆಯ ಬಿಸಿ ಕನ್ನಡ ಸಿನಿಮಾವರೆಗೆ ಹಬ್ಬಿದೆ ಎಂದು ಹೇಳಬಹುದು. ನಾಳೆ ಶುಕ್ರವಾರ ರಾಜಕೀಯಕ್ಕೆ ಸಂಬಂಧಪಟ್ಟ ಮೂರು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ.

ನಾಳೆ ಅಂದರೆ ಏಪ್ರಿಲ್ 27ರಂದು ನಂಜೇಗೌಡ ನಿರ್ದೇಶನದ ಹೆಬ್ಬೆಟ್ಟು ರಾಮಕ್ಕ, ಅಶೋಕ್ ಕಶ್ಯಪ್ ನಿರ್ದೇಶನದ ಧ್ವಜ ಮತ್ತು ಟಿ.ಎಸ್.ನಾಗಾಭರಣ ನಿರ್ದೇಶನದ ಕಾನೂರಾಯಣ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವೆಲ್ಲವೂ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರಗಳು.

ಇದು ಕೇವಲ ಕಾಕತಾಳೀಯವಷ್ಟೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಬಿಡುಗಡೆಯಾಗುತ್ತಿದೆ ಎನ್ನುತ್ತಾರೆ. ತಾರಾ ಅನುರಾಧ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕೆ ಕಳೆದ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಇರುವ ಚಿತ್ರವಿದು. ಕಾನೂರಾಯಣ ಹಳ್ಳಿ ರಾಜಕೀಯದ ಬಗ್ಗೆ ಕಥೆ ಒಳಗೊಂಡಿದ್ದರೆ, ಧ್ವಜ ರಾಜಕೀಯ ಕಾರ್ಯಕರ್ತರೊಬ್ಬರ ಕೊಲೆಗೆ ಸಂಬಂಧಪಟ್ಟದ್ದಾಗಿದೆ.

ಇದಕ್ಕೂ ಮುಂಚೆ ಕನ್ನಡದಲ್ಲಿ ಮತದಾನ, ಬರ, ಅಂತ, ಗೋಲಿಬಾರ್ ಮತ್ತು ಅವಸ್ಥೆ ಮೊದಲಾದ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರಗಳು ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com