ಕನ್ನಡಕ್ಕೆ ಮತ್ತೊಬ್ಬ ತಮಿಳು ನಟನ ಪಾದಾರ್ಪಣೆ!

ಪರ ಭಾಷಾ ತಾರಾ ನಟರು ಇದೀಗ ಸ್ಯಾಂಡಲ್ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ...
ಭರತ್, ಶಾನ್ವಿ ಶ್ರೀವಾತ್ಸವ್
ಭರತ್, ಶಾನ್ವಿ ಶ್ರೀವಾತ್ಸವ್
ಪರ ಭಾಷಾ ತಾರಾ ನಟರು ಇದೀಗ ಸ್ಯಾಂಡಲ್ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. 
ಹೌದು, ಬಾಯ್ಸ್ ಹಾಗೂ ಕಾದಲ್ ಚಿತ್ರದ ನಟ ಭರತ್ ಇದೀಗ ಅಖಿಲ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಸೂರಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದು ಭರತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 
ಚಿತ್ರವನ್ನು ಅನೂಪ್ ಆಂಟೋನಿ ಎಂಬುವರು ನಿರ್ದೇಶಿಸುತ್ತಿದ್ದಾರೆ. ಅನೂಪ್ ಅವರದ್ದು ಇದು ಎರಡನೇ ಚಿತ್ರವಾಗಿದ್ದು ಇದಕ್ಕೆ ಮುನ್ನ ಕಥಾ ವಿಚಿತ್ರ ಚಿತ್ರವನ್ನು ನಿರ್ದೇಶಿಸಿದ್ದರು. 
ಚಿತ್ರದ ಕಥೆ ಇಷ್ಟವಾಗಿದ್ದು ಚಿತ್ರದಲ್ಲಿ ಅಭಿನಯಿಸುವುದಾಗಿ ಭರತ್ ಹೇಳಿದ್ದಾರೆ. ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು ಅಭಿಲಾಶ್ ಕಲಾತಿ ಅವರ ಛಾಯಾಗ್ರಹಣವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com