ಕೇರಳ ಪ್ರವಾಹ ಪೀಡಿತರ ನೆರವಿಗೆ ನಿಂತ ರೀಲ್ ಹೀರೋ ವಿಜಯ್, ನಟಿ ಅನುಪಮ!

ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನುಪಮ ಪರಮೇಶ್ವರನ್ ಇದೀಗ ತಮ್ಮ ಮಾನವೀಯ ಕಾರ್ಯದ ಮೂಲಕ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾರೆ...
ವಿಜಯ್ ದೇವರಕೊಂಡ, ಅನುಪಮ ಪರಮೇಶ್ವರನ್
ವಿಜಯ್ ದೇವರಕೊಂಡ, ಅನುಪಮ ಪರಮೇಶ್ವರನ್
ಹೈದರಾಬಾದ್/ತಿರುವನಂತಪುರಂ: ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನುಪಮ ಪರಮೇಶ್ವರನ್ ಇದೀಗ ತಮ್ಮ ಮಾನವೀಯ ಕಾರ್ಯದ ಮೂಲಕ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾರೆ. 
ಮಹಾ ಮಳೆಗೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ರಾಜ್ಯದ ಹಲವೆಡೆ ಪ್ರವಾಸ ಸಂಭವಿಸಿದೆ. ಇನ್ನು ರಾಜ್ಯದ ಜಲಾಶಯಗಳೆಲ್ಲ ತುಂಬಿ ಹರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಜಯ್ ದೇವರಕೊಂಡ ಮತ್ತು ಅನುಪಮ ಕೇರಳಿಗರಿಗೆ ನೆರವಿನ ಹಸ್ತ ಚಾಚಿದ್ದಾರೆ. 
ವಿಜಯ್ ದೇವರಕೊಂಡ ಅವರು ಕೇರಳದ ಪ್ರವಾಹ ಪೀಡಿತ ಪರಿಹಾರ ಕಾರ್ಯಕ್ಕೆ 5 ಲಕ್ಷ ರುಪಾಯಿ ನೀಡಿದ್ದರೆ, ಅನುಪಮ ಅವರು 1 ಲಕ್ಷ ರುಪಾಯಿ ಪರಿಹಾರ ನೀಡಿದ್ದಾರೆ. 
ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿರುವ ವಿಜಯ್, ರಜಾ ದಿನಗಳಲ್ಲಿ ಕೇರಳ ನನ್ನ ನೆಚ್ಚಿನ ತಾಣವಾಗಿತ್ತು. ನಾನು ಕೇರಳದಲ್ಲಿ ಹಲವರನ್ನು ಭೇಟಿ ಮಾಡಿದ್ದೇನೆ. ಮಾತ್ರವಲ್ಲದೆ ನನ್ನ ಹಲವು ಆಪ್ತರು ಅಲ್ಲಿದ್ದಾರೆ. ವೈಯಕ್ತಿಕವಾಗಿ ಹಣವನ್ನು ಹೇಗೆ ತಲುಪಿಸಬೇಕೆಂದು ತಿಳಿಯುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. 
ವಿಜಯ್ ಮತ್ತು ಅನುಪಮ ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com