ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರಕ್ಕಾಗಿ ಮತ್ತಿಬ್ಬರು ನಟಿಮಣಿಯರನ್ನು ಕರೆತಂದ ಸೂರಿ!

ದುನಿಯಾ ಸೂರಿ ನಿರ್ದೇಶನದ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರಕ್ಕಾಗಿ ತಾರಾಗಣ ಆಯ್ಕೆಯಾಗಿ ಬ್ಯುಸಿಯಾಗಿದ್ದಾರೆ...
ಧನಂಜಯ್-ಸೂರಿ
ಧನಂಜಯ್-ಸೂರಿ
ದುನಿಯಾ ಸೂರಿ ನಿರ್ದೇಶನದ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರಕ್ಕಾಗಿ ತಾರಾಗಣ ಆಯ್ಕೆಯಾಗಿ ಬ್ಯುಸಿಯಾಗಿದ್ದಾರೆ. 
ಅದಾಗಲೇ ಸೂರಿ ಧನಂಜಯ್ ಮತ್ತು ನಿವೇಧಿತರನ್ನು ನಾಯಕ-ನಾಯಕಿ ಆಯ್ಕೆ ಮಾಡಿದ್ದಾರೆ. ಇನ್ನು ಸಪ್ತಮಿ ಮತ್ತು ಅಮೃತ ಇಬ್ಬರು ನಟಿಮಣಿಯರನ್ನು ಚಿತ್ರಕ್ಕಾಗಿ ಸೂರಿ ಆಯ್ಕೆ ಮಾಡಿದ್ದಾರೆ. 
ಒಂದು ಚಿತ್ರವನ್ನು ನಿರ್ದೇಶನ ಮಾಡಬೇಕಾದರೆ ಆ ನಿರ್ದೇಶಕನಿಗೆ ಸ್ಪಷ್ಟತೆ ಇರಬೇಕು. ಇನ್ನು ಪಾತ್ರಕ್ಕೆ ಹೊಂದಿಕೊಳ್ಳುವಂತವರನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ನಿರ್ದೇಶನಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಇದೇ ದೃಷ್ಟಿಯಿಂದ ನಾನು ಪಾತ್ರಧಾರಿಗಳನ್ನು ಅಂತಿಮಗೊಳಿಸಿದ್ದೇನೆ ಎಂದರು. 
ಟಗರು ಚಿತ್ರ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರೇ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಂಭಾಷಣೆ ಮಾಸ್ತಿ ಮಂಜು ಬರೆಯುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ರ ಛಾಯಾಗ್ರಹಣವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com