'ಕಾಫಿ ತೋಟ'ದ ಹುಡುಗಿ ಅಪೇಕ್ಷಾ ಕೈ ಹಿಡಿದ ನಿರ್ದೇಶಕ ಪವನ್ ಒಡೆಯರ್

ಸ್ಯಾಂಡಲ್ ವುಡ್ ನ ಪ್ರಮುಖ ನಿರ್ದೇಶಕ ಪವನ್ ಒಡೆಯರ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಕಾಫಿತೋಟ' ಹುಡುಗಿಯ ಕೈ ಹಿಡಿದ ನಿರ್ದೇಶಕ  ಪವನ್ ಒಡೆಯರ್
'ಕಾಫಿತೋಟ' ಹುಡುಗಿಯ ಕೈ ಹಿಡಿದ ನಿರ್ದೇಶಕ ಪವನ್ ಒಡೆಯರ್
ಬಾಗಲಕೋಟೆ: ಸ್ಯಾಂಡಲ್ ವುಡ್ ನ ಪ್ರಮುಖ ನಿರ್ದೇಶಕ ಪವನ್ ಒಡೆಯರ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪವನ್‌ ಒಡೆಯರ್‌ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವಿವಾಹವಾಗಿದ್ದು ಬಾಗಲಕೋಟೆಯಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದೆ. ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ನವಜೋಡಿ ಹಸೆಮಣೆ ಏರಿದ್ದಾರೆ.
ನಿನ್ನೆ (ಭಾನುವಾರ) ಇಬ್ಬರ ಆರತಕ್ಷತೆ ಕಾರ್ಯಕ್ರಮವೂ ಸಹ ಇಲ್ಲಿಯೇ ನಡೆದಿತ್ತು. ವಿವಾಹವು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದ್ದು ಈ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಿನಿಮಾ ರಂಗ ಗಣ್ಯರಿಗಾಗಿ ಇನ್ನೊಮ್ಮೆ ಆರತಕ್ಷತೆ ಏರ್ಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿದೆ.
ಇಂದಿನ ವಿಒವಾಹ ಕಾರ್ಯಕ್ರಮಕ್ಕೆ ಸಹ ಪುನೀತ್‌ ರಾಜ್‌ಕುಮಾರ್‌  ಮತ್ತಿತರೆ ಚಿತ್ರನಟ, ನಟಿಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
`ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಪವನ್ ಒಡೆಯರ್ ಸಧ್ಯ  ಪುನೀತ್ ಅಭಿನಯದ `ನಟ ಸಾರ್ವಭೌಮ’ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.
 ಬಾಗಲಕೋಟೆಯ ಮೂಲದ ನಟಿ ಅಪೇಕ್ಷಾ ಸಹ  ಕನ್ನಡದ ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮ, ಧಾರಾವಹಿಗಳಲ್ಲಿ ಅಭಿನಯಿಸಿದ್ದಲ್ಲದೆ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಚಿತ್ರದಲ್ಲಿ ಸಹ ನಟಿಸಿದ್ದಾರೆ.
ಬಾಗಲಕೋಟೆಯ  ಹರಿಪ್ರಿಯಾ ಹೋಟೆಲ್‍ನಲ್ಲಿ ಕಳೆದ ಡಿಸೆಂಬರ್ ನಲ್ಲಿ ಪವನ್ ಹಾಗೂ ಅಪೇಕ್ಷಾ ಅವರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com