'ಕಾಫಿ ತೋಟ'ದ ಹುಡುಗಿ ಅಪೇಕ್ಷಾ ಕೈ ಹಿಡಿದ ನಿರ್ದೇಶಕ ಪವನ್ ಒಡೆಯರ್

ಸ್ಯಾಂಡಲ್ ವುಡ್ ನ ಪ್ರಮುಖ ನಿರ್ದೇಶಕ ಪವನ್ ಒಡೆಯರ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಕಾಫಿತೋಟ' ಹುಡುಗಿಯ ಕೈ ಹಿಡಿದ ನಿರ್ದೇಶಕ  ಪವನ್ ಒಡೆಯರ್
'ಕಾಫಿತೋಟ' ಹುಡುಗಿಯ ಕೈ ಹಿಡಿದ ನಿರ್ದೇಶಕ ಪವನ್ ಒಡೆಯರ್
Updated on
ಬಾಗಲಕೋಟೆ: ಸ್ಯಾಂಡಲ್ ವುಡ್ ನ ಪ್ರಮುಖ ನಿರ್ದೇಶಕ ಪವನ್ ಒಡೆಯರ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪವನ್‌ ಒಡೆಯರ್‌ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವಿವಾಹವಾಗಿದ್ದು ಬಾಗಲಕೋಟೆಯಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದೆ. ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ನವಜೋಡಿ ಹಸೆಮಣೆ ಏರಿದ್ದಾರೆ.
ನಿನ್ನೆ (ಭಾನುವಾರ) ಇಬ್ಬರ ಆರತಕ್ಷತೆ ಕಾರ್ಯಕ್ರಮವೂ ಸಹ ಇಲ್ಲಿಯೇ ನಡೆದಿತ್ತು. ವಿವಾಹವು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದ್ದು ಈ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಿನಿಮಾ ರಂಗ ಗಣ್ಯರಿಗಾಗಿ ಇನ್ನೊಮ್ಮೆ ಆರತಕ್ಷತೆ ಏರ್ಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿದೆ.
ಇಂದಿನ ವಿಒವಾಹ ಕಾರ್ಯಕ್ರಮಕ್ಕೆ ಸಹ ಪುನೀತ್‌ ರಾಜ್‌ಕುಮಾರ್‌  ಮತ್ತಿತರೆ ಚಿತ್ರನಟ, ನಟಿಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
`ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಪವನ್ ಒಡೆಯರ್ ಸಧ್ಯ  ಪುನೀತ್ ಅಭಿನಯದ `ನಟ ಸಾರ್ವಭೌಮ’ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.
 ಬಾಗಲಕೋಟೆಯ ಮೂಲದ ನಟಿ ಅಪೇಕ್ಷಾ ಸಹ  ಕನ್ನಡದ ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮ, ಧಾರಾವಹಿಗಳಲ್ಲಿ ಅಭಿನಯಿಸಿದ್ದಲ್ಲದೆ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಚಿತ್ರದಲ್ಲಿ ಸಹ ನಟಿಸಿದ್ದಾರೆ.
ಬಾಗಲಕೋಟೆಯ  ಹರಿಪ್ರಿಯಾ ಹೋಟೆಲ್‍ನಲ್ಲಿ ಕಳೆದ ಡಿಸೆಂಬರ್ ನಲ್ಲಿ ಪವನ್ ಹಾಗೂ ಅಪೇಕ್ಷಾ ಅವರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com