ಇನ್ನೇಷ್ಟು ಹೆಚ್ಚಿನ ಸ್ವಾತಂತ್ರದ ಅಗತ್ಯವಿದೆ: ನಾಸಿರುದ್ದೀನ್ ಶಾಗೆ ಅನುಪಮ್ ಖೇರ್ ಪ್ರಶ್ನೆ

ಉತ್ತರ ಪ್ರದೇಶದ ಬುಲೆಂದ ಶಹರ್ ಹಿಂಸಾಚಾರ ಕುರಿತಂತೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲಾ, ಅದು ಸತ್ಯವಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.
ಅನುಪಮ್ ಖೇರ್, ನಾಸಿರುದ್ದೀನ್ ಶಾ
ಅನುಪಮ್ ಖೇರ್, ನಾಸಿರುದ್ದೀನ್ ಶಾ

ಮುಂಬೈ: ಉತ್ತರ ಪ್ರದೇಶದ ಬುಲೆಂದ ಶಹರ್  ಹಿಂಸಾಚಾರ ಕುರಿತಂತೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲಾ, ಅದು ಸತ್ಯವಲ್ಲ ಎಂದು  ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.

ದೇಶದಲ್ಲಿನ ಹೆಚ್ಚಿನ ರೀತಿಯ ಸ್ವಾತಂತ್ರವಿದ್ದರೂ ಸೇನೆ ಬಗ್ಗೆ ಅವಮಾನಿಸಿದ್ದೀರಿ, ವಾಯುಪಡೆ ಮುಖ್ಯಸ್ಥರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀರಿ ಅಲ್ಲದೇ ಸೈನಿಕರಿಗೆ ಕಲ್ಲು ತೂರಿದ್ದೀರಿ . ಹಾಗಾದರೆ ನಿಮ್ಮಗೆ ಇನ್ನೇಷ್ಟು ಹೆಚ್ಚಿನ ಸ್ವಾತಂತ್ರದ ಅಗತ್ಯವಿದೆ ಎಂದು ಅನುಪಮ್ ಖೇರ್ ಪ್ರಶ್ನಿಸಿದ್ದಾರೆ.

ಬಾಲಿವುಡ್ ಖ್ಯಾತ ನಟರಾಗಿರುವ ನಾಸಿರುದ್ದೀನ್ ಶಾ ಬುಲೆಂದ ಶಹರ್ ಹಿಂಸಾಚಾರ ಕುರಿತಂತೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಹಿಂಸಾಚಾರದಲ್ಲಿನ ಪೊಲೀಸರ ಸಾವಿಗಿಂತಲೂ ಗೋವು ಹತ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ ಎಂದು ನಾಸಿರುದ್ದೀನ್ ಶಾ  ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com