ಬೆಂಗಳೂರು; ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಟ ಯಶ್ ಅವರು ಭಾಗವಹಿಸಿ ರೂ. 25 ಲಕ್ಷ ಬಹುಮಾನ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿ ಗೆದ್ದಿರುವ ಹಣವನ್ನು ಯಶ್ ಅವರು ತಮ್ಮ ಸಾರಥ್ಯದ ಯಶೋಮಾರ್ಗ ಟ್ರಸ್ಟ್'ಗೆ ನೀಡಲು ನಿರ್ಧರಿಸಿದ್ದು, ಯಶ್ ಅವರು ಪಾಲ್ಗೊಂಡಿರುವ ಎಪಿಸೋಡ್ ಶುಕ್ರವಾರ ಪ್ರಸಾರವಾಗಲಿದೆ.
ಸಾಮಾನ್ಯ ಸ್ಪರ್ಧಿಗಳ ಜೊತೆ ಪ್ರತೀವಾರ ಒಬ್ಬರು ಸೆಲೆಬ್ರಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅದರ ಭಾಗವಾಗಿ ನಟ ಯಶ್ ಅವರೂ ಕೂಡ ಕನ್ನಡದ ಕೋಟ್ಯಾಧಿಪತಿಯಲ್ಲಿ ಪಾಲ್ಗೊಂಡಿದ್ದು, ಒಟ್ಟು ರೂ.25 ಲಕ್ಷ ಗೆದ್ದಿದ್ದಾರೆ.
ಈಗಾಗಲೇ ಯಶ್ ಕನ್ನಡ ಕೋಟ್ಯಾಧಿಪತಿಯಲ್ಲಿ ಭಾಗವಹಿಸಿರುವ ಪ್ರೋಮೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸರಳತೆ, ತಿಳಿಹಾಸ್ಯದ ಮೂಲಕ ಕಾರ್ಯಕ್ರಮಕ್ಕೆ ಯಶ್ ಅವರು ಮೆರಗು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಯಶ್ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಚಿತ್ರರಂಗದಲ್ಲಿ ತಾವು ಎದುರಿಸಿದ ಸವಾಲುಗಳ ಕುರಿತು ಯಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.