ಹಲವು ಮೊದಲುಗಳನ್ನು ಸೃಷ್ಟಿಸಲಿರುವ 'ಬೀರ್‌ಬಲ್ ಟ್ರಯಾಲಜಿ'

ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಿರ್ದೇಶಕ, ನಟ ಎಂಜಿ ಶ್ರೀನಿವಾಸ್ ಇದೀಗ ಬೀರ್‌ಬಲ್ ಟ್ರಯಾಲಜಿ ಚಿತ್ರದ ಮೂಲಕ ಹಲವು...
ಬೀರ್‌ಬಲ್ ಟ್ರಯಾಲಜಿ
ಬೀರ್‌ಬಲ್ ಟ್ರಯಾಲಜಿ
Updated on
ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಿರ್ದೇಶಕ, ನಟ ಎಂಜಿ ಶ್ರೀನಿವಾಸ್ ಇದೀಗ ಬೀರ್‌ಬಲ್ ಟ್ರಯಾಲಜಿ ಚಿತ್ರದ ಮೂಲಕ ಹಲವು ಮೊದಲುಗಳನ್ನು ಸೃಷ್ಟಿಸಲಿದ್ದಾರೆ. 
ಶ್ರೀನಿವಾಸ ಕಲ್ಯಾಣ ಚಿತ್ರ ರೊಮ್ಯಾಂಟಿಕ್-ಕಾಮಿಡಿ ಚಿತ್ರವಾಗಿತ್ತು. ಇದೀಗ ಬೀರ್‌ಬಲ್ ಒಂದೇ ಟೈಟಲ್ ಇಟ್ಟುಕೊಂಡು ಆ ಚಿತ್ರದ ಮೂರು ಸೀಕ್ವೆಲ್ ಗಳನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಬೀರ್‌ಬಲ್ ಟ್ರಯಾಲಜಿಯ ಮೊದಲ ಹಂತದ ಕೇಸ್-1 ಫೈಂಡಿಂಗ್ ವಜ್ರಮುನಿ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ. 
ಬೀರ್‌ಬಲ್ ಟ್ರಯಾಲಜಿಯಲ್ಲಿ ಮೊದಲ ಭಾಗ 'ಫೈಂಡಿಂಗ್ ವಜ್ರಮುನಿ', ಎರಡನೇ ಭಾಗದಲ್ಲಿ 'ಅವ್ರನ್ ಬಿಟ್ಟು ಇವ್ರನ್ ಬಿಟ್ಟು ಅವರ್ಯಾರು' ಮೂರನೇ ಭಾಗಕ್ಕೆ 'ತುರೆಮಣೆ' ಎಂದು ಸಬ್ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಶ್ರೀನಿವಾಸ್ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
ಈ ಚಿತ್ರಕ್ಕಾಗಿ ಶ್ರೀನಿವಾಸ್ ಆತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾವನ್ನು ಬಳಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಕಾಲಾಚರಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜಾನ್ ಸೀನ ಚಿತ್ರಕ್ಕೆ ಬಂಡವಾಳ ಹೂಡಿರುವ ಟಿ ಆರ್ ಚಂದ್ರಶೇಖರ್ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com