ನೆಗೆಟಿವ್ ರೋಲ್ ನಲ್ಲಿ ಮನೋರಂಜನ್ ರವಿಚಂದ್ರನ್!

ಬೃಹಸ್ಪತಿ ಸಿನಿಮಾ ನಂತರ ರವಿಚಂದ್ರನ್ ಮನೋರಂಜನ್ ಮುಂದಿನ ಚಿತ್ರಕ್ಕೆ ಸಹಿ ಮಾಡಲು ಕಾಯುತ್ತಿದ್ದಾರೆ. ತಮ್ಮ ಹಿಂದಿನ ಸಿನಿಮಾ ಬಗ್ಗೆ ಪ್ರೇಕ್ಷಕರ ...
ಮನೋರಂಜನ್
ಮನೋರಂಜನ್
ಬೆಂಗಳೂರು:  ಬೃಹಸ್ಪತಿ ಸಿನಿಮಾ ನಂತರ ರವಿಚಂದ್ರನ್ ಮನೋರಂಜನ್ ಮುಂದಿನ ಚಿತ್ರಕ್ಕೆ ಸಹಿ ಮಾಡಲು ಕಾಯುತ್ತಿದ್ದಾರೆ. ತಮ್ಮ ಹಿಂದಿನ ಸಿನಿಮಾ ಬಗ್ಗೆ ಪ್ರೇಕ್ಷಕರ ಅಭಿಪ್ರಾಯಗಳಿಗಾಗಿ ಕಾಯುತ್ತಿದ್ದು ವಿಭಿನ್ನವಾದ ಪಾತ್ರದಲ್ಲಿ ನಟಿಸಲು ಹಾಗೂ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದಾರೆ.
ಮನೋರಂಜನ್ ಈ ಹೊಸ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ, ಕಥೆಗೆ ಮಾತ್ರ ಪ್ರಾಮುಖ್ಯತೆ ಕೊಡಲು ನಿರ್ಧರಿಸಿದ್ದಾರೆ, ಹೀಗಾಗಿ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಲು ಮುಂದಾಗಿರುವ ಮನೋರಂಜನ್ ನೆಗೆಟಿವ್ ಪಾತ್ರದಲ್ಲಿ ನಟಿಸಲಿದ್ದಾರೆ.
ಕ್ವಾಟ್ಲೆ ನಿರ್ದೇಶಕಿ ಜೆ. ಚಂದ್ರಕಲಾ ಅವರ ಜೊತೆ ಈಗಾಗಲೇ ಮನೋರಂಜನ್ ಚರ್ಚೆ ನಡೆಸಿದ್ದಾರೆ, ಎರಡು ಕಥೆಗಳನ್ನು ಚಂದ್ರಕಲಾ ಮನೋರಂಜನ್ ಗೆ ಹೇಳಿದ್ದರು, ಅದರಲ್ಲಿ ಒಂದು ಕಥೆಯನ್ನು ಮನೋರಂಜನ್ ಆಯ್ಕೆ ಮಾಡಬೇಕಿದೆ, 
ಮನೋರಂಜನ್ ಚಿತ್ರಕ್ಕೆ ಸಹಿ ಹಾಕಿದ ನಂತರ ಮುಂದಿನ ಸಿದ್ಧತೆ ಕೈಗೊಳ್ಳಲಾಗುವುದು, ಅನಾತರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಮನೋರಂಜನ್ ನನ್ನು  ಸ್ಟೈಲಿಶ್ ಮಾಸ್ ಹೀರೋ ಆಗಿ ತೋರಿಸಲು ನಿರ್ಧರಿಸಿದ್ದಾರೆ. ಆದರೆ ಇದು ನೆಗೆಟಿವ್ ಪಾತ್ರವಾಗಿದೆ, ಯೋಜನೆಯ ಪ್ರಕಾರ ಎಲ್ಲವೂ ಮುಂದುವರಿದರೇ ಮನೋರಂಜನ್ ಆಸಕ್ತಿದಾಯಕ ಪ್ರಾಜೆಕ್ಟ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com