ಜನರು ಅಪರಾಧಕ್ಕೆ ಸಂಬಂಧಿಸಿರುವ ನಾಲ್ಕು ಅಥವಾ ಐದು ಕಾರ್ಯಕ್ರಮಗಳನ್ನು ನಿತ್ಯವೂ ವೀಕ್ಷಿಸುತ್ತಾರೆ. ದಿನಪ್ತ್ರಿಕೆಗಳಲ್ಲಿ ಒಂದಾದರೂ ಅಪರಾಧ ಸುದ್ದಿ ಇಲ್ಲದೆ ಇರುವ ದಿನಗಳಿಲ್ಲ. ಹೀಗಿರುವಾಗ ಚಲನಚಿತ್ರಗಳನ್ನಷ್ಟೇ ಏಕೆ ಪರಾಧ ವೈಭವೀಕರಣ ಎಂದು ದೂರುತ್ತಾರೆ? ಎಂದು ಪ್ರಶ್ನಿಸುವ ಪೂಜಾ ದಂಡುಪಾಳ್ಯದಲ್ಲಿ ಕೇವಲ ಕೊಲೆಯಷ್ಟೇ ಇಲ್ಲ, ಸಂದೇಶವೂ ಇದೆ. ’ನಿಮ್ಮ ಸನಿಹದಲ್ಲೇ ದುಷ್ಟರಿದ್ದಾರೆ, ಯಾವ ಕ್ಷಣದಲ್ಲಿಯೂ ಅಪಾಯ ಸಂಭವಿಸಬಹುದು, ಎಚ್ಚರವಾಗಿಇರಿ’ ಎನ್ನುವ ಸಂದೇಶವೂ ಇದೆ. ಇನ್ನು ಚಿತ್ರವನ್ನು ಒಂದು ಮನರಂಜನೆ ಸಾಧನವಾಗಿ ನೋಡಿರಿ ಎಂದು ನಟಿ ಹೇಳುತ್ತಾರೆ.