ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದಲ್ಲಿ ವಿಹಾನ್ ಗೌಡ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ರೇಸಿಂಗ್ ಟ್ರಕ್ ಈ ಚಿತ್ರದ ಪ್ರಮುಖ ಅಂಶವಾಗಿದ್ದು, ಅದಕ್ಕಾಗಿ ವಿಹಾನ್ ಗೌಡ ಸಜ್ಜುಗೊಳ್ಳುತ್ತಿದ್ದಾರೆ.
ಪ್ರಸ್ತುತ ರಾಮಘರ ಅಥವಾ ಪಾಂಡವಪುರದಲ್ಲಿ ಚಿತ್ರ ತಂಡವಿದ್ದು, ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಾಳೆ ನಡೆಯಲಿದೆ. ಇಲ್ಲಿ ಕೆಲ ಸನ್ನಿವೇಶಗಳನ್ನು ಚಿತ್ರೀಕರಣಗೊಳಿಸಲಿದ್ದು, 18 ದಿನದೊಳಗೆ ಅಂದರೆ ಜೂನ್ 1 ರೊಳಗೆ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಚಿತ್ರದ ಸದಸ್ಯರೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ಸಾಹಸ ನಿರ್ದೇಶನಕಾರ ಜಾಲಿ ಬಾಸ್ಟಿನ್ ಈ ಚಿತ್ರಕ್ಕೆ ಸಾಹಸ ನಿರ್ದೇಶನವಿದ್ದು, ರೇಸಿಂಗ್ ಟ್ರಕ್ ನಲ್ಲಿ ಪರಿಣತಿ ಹೊಂದಿದ್ದಾರೆ. ರೇಸರ್ ಮೊನಿಸ್ ಕೂಡಾ ಈ ಸಂಬಂಧಿತ ಚಿತ್ರೀಕರಣದಲ್ಲಿ ಮಾರ್ಗದರ್ಶನ, ಸಲಹೆ ನೀಡಲಿದ್ದಾರೆ. ಚಿತ್ರೀಕರಣದಲ್ಲಿ ಅವರ ಕೂಡಾ ಭಾಗಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಂಚತಂತ್ರದ ಎರಡು ಗೀತೆಗಳನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವಿಹಾನ್ ಗೌಡ ಅವರೊಂದಿಗೆ ಸೋನಾಲ್ ಮಾಂಟೆರಿಯೊ ಮತ್ತ ಅಕ್ಷರ ಗೌಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯುವ ಮತ್ತು ಹಳೆಯ ಪೀಳಿಗೆಯ ನಡುವಿನ ಸಂಘರ್ಘವನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ. ರಂಗಾಯಣ ರಘು ಹಾಗೂ ಸಿಮ್ರಾನ್ ಕೂಡಾ ಈ ಚಿತ್ರದಲ್ಲಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಸುಜ್ಞಾನ್ ಕ್ಯಾಮರಾ ಕೆಲಸ ನಿರ್ವಹಿಸುತ್ತಿದ್ದಾರೆ.
Advertisement