ಮಾನ್ಯತಾ ಟೆಕ್ ಪಾರ್ಕ್ನ ವೈಟ್ ಆರ್ಕಿಡ್ಸ್ ಸಭಾಭವನದಲ್ಲಿ ನಿನ್ನೆ ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ಉಡುಪಿಯ ಅಭಿಜಾತ್ ಭಟ್, ಇಟಗಿಯ ವಿಶ್ವಪ್ರಸಾದ್, ಬಳ್ಳಾರಿಯ ಶಿಶು ತಾನಸೇನ್ ಜ್ಞಾನೇಶ್, ಬೆಂಗಳೂರಿನ ಕೀರ್ತನ, ಮತ್ತು ಕ್ವಾರ್ಟರ್ ಫಿನಾಲೆಯಿಂದ ನೇರವಾಗಿ ಫೈನಲ್ ತಲುಪಿದ ಚನ್ನಗಿರಿಯ ತೇಜಸ್ ಶಾಸ್ತ್ರಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡು ಬಂತು.