ಶಿವ ಗಣೇಶ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಲಿದ್ದಾರೆ. ಕೆ ಮಂಜು ನಿರ್ಮಾಣದ ಚಿತ್ರಕ್ಕೆ ಆ ದೃಶ್ಯ ಎಂದು ಶೀರ್ಷಿಕೆಯಿಡಲಾಗಿದೆ.
ಮಲಯಾಳಂ ಚಿತ್ರ ದೃಶ್ಯಂನ ರಿಮೇಕ್ ನ ದೃಶ್ಯ ಚಿತ್ರದಲ್ಲಿ ಈಗಾಗಲೇ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ಅದೇ ಶೀರ್ಷಿಕೆಯ ಚಿತ್ರದಲ್ಲಿ ನಟಿಸುತ್ತಿದ್ದು ಅದರ ಜೊತೆ ಆ ಅಕ್ಷರ ಸೇರಿಕೊಂಡಿದೆ.
ತಮಿಳು ಚಿತ್ರ ಡಿ-16(ದ್ರುವಂಗಲ್ ಪಡಿನಾರು)ವಿನಿಂದ ಪ್ರೇರಣೆಗೊಂಡ ಚಿತ್ರ ಇದಾಗಿದ್ದು ಮೂಲ ಚಿತ್ರವನ್ನು ಕಾರ್ತಿಕ್ ನಾರೇಣ್ ಕಥೆ ಬರೆದು ನಿರ್ದೇಶಿಸಿದ್ದರು.
ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿ ಪಾತ್ರ. ಅಂತಿಮ ಹಂತದ ಚಿತ್ರೀಕರಣದಲ್ಲಿರುವ ಚಿತ್ರತಂಡ ಇನ್ನು ಕೆಲವು ದಿನಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಹಂತವನ್ನು ತಲುಪಲಿದೆ.
Advertisement