ಕ್ರೇಜಿಸ್ಟಾರ್ ಮುಂದಿನ ಚಿತ್ರ ' ಆ ದೃಶ್ಯ'

ಶಿವ ಗಣೇಶ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಲಿದ್ದಾರೆ...
ರವಿಚಂದ್ರನ್
ರವಿಚಂದ್ರನ್
Updated on

ಶಿವ ಗಣೇಶ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಲಿದ್ದಾರೆ. ಕೆ ಮಂಜು ನಿರ್ಮಾಣದ  ಚಿತ್ರಕ್ಕೆ ಆ ದೃಶ್ಯ ಎಂದು ಶೀರ್ಷಿಕೆಯಿಡಲಾಗಿದೆ.

ಮಲಯಾಳಂ ಚಿತ್ರ ದೃಶ್ಯಂನ ರಿಮೇಕ್ ನ ದೃಶ್ಯ ಚಿತ್ರದಲ್ಲಿ ಈಗಾಗಲೇ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ಅದೇ ಶೀರ್ಷಿಕೆಯ ಚಿತ್ರದಲ್ಲಿ ನಟಿಸುತ್ತಿದ್ದು ಅದರ ಜೊತೆ ಆ ಅಕ್ಷರ ಸೇರಿಕೊಂಡಿದೆ.

ತಮಿಳು ಚಿತ್ರ ಡಿ-16(ದ್ರುವಂಗಲ್ ಪಡಿನಾರು)ವಿನಿಂದ ಪ್ರೇರಣೆಗೊಂಡ ಚಿತ್ರ ಇದಾಗಿದ್ದು ಮೂಲ ಚಿತ್ರವನ್ನು ಕಾರ್ತಿಕ್ ನಾರೇಣ್ ಕಥೆ ಬರೆದು ನಿರ್ದೇಶಿಸಿದ್ದರು.

ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿ ಪಾತ್ರ. ಅಂತಿಮ ಹಂತದ ಚಿತ್ರೀಕರಣದಲ್ಲಿರುವ ಚಿತ್ರತಂಡ ಇನ್ನು ಕೆಲವು ದಿನಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಹಂತವನ್ನು ತಲುಪಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com