1994 ರಿಂದ ರಾಜಕೀಯ ಜೀವನ ಆರಂಭಿಸಿದ ಅಂಬರೀಷ್ ಅಂದಿನ ಪ್ರಧಾನಿ ಪಿ,ವಿ ನರಸಿಂಹ ರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್ ತೊರೆದಿದ್ದ ಅವರು, ಜನತಾ ದಳ ಸೇರ್ಪಡೆಗೊಂಡಿದ್ದರು, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕನಕಪುರ ಲೋಕಸಭೆ ಕ್ಷೇತ್ರದಿಂದ ದೇವೇಗೌಡರು ಆಯ್ಕೆಯಾದರು, ಗೌಡರ ರಾಜಿನಾಮೆಯಿಂದ ತೆರವಾದ ವಿಧಾನಸಭೆ ಕ್ಷೇತ್ರಕ್ಕೆ 1996 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಷ್ ಕಾಂಗ್ರೆಸ್ ನ ಸಿಎಂ ಲಿಂಗಪ್ಪ ವಿರುದ್ದ ಸೋಲನುಭವಿಸಿದ್ದರು.