ಆದರೆ ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ, ಚಿತ್ರದ ಸಂಬಂಧ ಬಹಳಷ್ಟು ಕೆಲಸಗಳಾಗುತ್ತಿದ್ದು ಸ್ಕ್ರಿಪ್ಟ್ ಇದೀಗ ತಯಾರಾಗುತ್ತಿದೆ. ಐತಿಹಾಸಿಕ ಚಿತ್ರವೊಂದರ ನಿಒರ್ಮಾಣಕ್ಕೆ ಮುನ್ನ ಸಾಕಷ್ತು ಪೂರ್ವ ತಯಾರಿ ನಡೆಸುವುದು ಅಗತ್ಯವಾಗಲಿದೆ. ಅಲ್ಲದೆ ಇದು ದೊಡ್ಡ ಬಜೆಟ್ ಚಿತ್ರ, ಬಹುಭಾಷೆಗಳಲ್ಲಿ ತಯಾರಾಗುವ ಕಾರಣ ಸುದೀಪ್ ಇದನ್ನು ಬೇರೆಯವರೊಡನೆ ಹಂಚಿಕೊಳ್ಳಲು ಬಯಸುವುದಿಲ್ಲ. ಎಲ್ಲಾ ತಯಾರಿಯನ್ನೂ ಅವರೊಬ್ಬರೇ ಮಾಡುತ್ತಿದ್ದು ಇದಕ್ಕಾಗಿ ಹೆಚು ಸಮಯ ತೆಗೆದುಕೊಳ್ಳಲು ಅವರು ಸಮ್ಮತಿಸುತ್ತಾರೆ. ಇನ್ನು ನಮಗೆ ಸಿಕ್ಕ ಮಾಹಿತಿಯಂತೆ ವಾಲ್ಮೀಕಿ ಮಠದ ಸ್ವಾಮಿಗಳು ತಾವು ಸ್ವತಃಅ ಚಿತ್ರಕಥೆ ರಚನೆಗೆ ತೊಡಗಿದ್ದಾರೆ.