ಆಶು ಬೆದ್ರೆ ತಾರಾಗಣದ 'ರಂಗ ಮಂದಿರ' ಚಿತ್ರಕ್ಕೆ ಶಾಹುರಾಜ್ ಶಿಂಧೆ ನಿರ್ದೇಶನ

ರಾಧಾ ಕಲ್ಯಾಣ, ಸರ್ಪ ಸಂಪದ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ ಅಶು ಬೆದ್ರೆ ಜೊತೆಗೆ ಎಂಟು ವರ್ಷಗಳ ನಂತರ ಶಾಹುರಾಜ್ ಶಿಂಧೆ ರಂಗಮಂದಿರ ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ
ಆಶು ಬೆದ್ರೆ
ಆಶು ಬೆದ್ರೆ
Updated on

ರಾಧಾ ಕಲ್ಯಾಣ, ಸರ್ಪ ಸಂಪದ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ  ಆಶು ಬೆದ್ರೆ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ '  ಚಿತ್ರ ನಿರ್ಮಾಣದ ನಂತರ ಅರವಿಂದ ಶಾಸ್ತ್ರೀ ಜೊತೆಗೆ ಅಳಿದು ಉಳಿದವರು ಚಿತ್ರದಲ್ಲಿ ಅಭಿನಯಿಸಿದ್ದರು. ಈಗ  ಮತ್ತೊಂದು ಮುಖ ತೋರಿಸಲು ಸಿದ್ಧತೆ ನಡೆಸಿದ್ದಾರೆ.

ಹೊನಾರಿಯಾ ಪ್ರೊಢಕ್ಷನ್ ಅಡಿಯಲ್ಲಿ  'ರಂಗ ಮಂದಿರ ' ಶೀರ್ಷಿಕೆಯ ಚಿತ್ರದಲ್ಲಿ ಆಶು ಬೆದ್ರೆ  ಅಭಿನಯಿಸುತ್ತಿದ್ದಾರೆ.  ಗಣೇಶ ಹಬ್ಬದ ನಂತರ  ಸೆಪ್ಟೆಂಬರ್ 14 ರಿಂದ ಚಿತ್ರೀಕರಣ ಆರಂಭವಾಗಲಿದೆ. ಶಾಹುರಾಜ್ ಶಿಂಧೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ  ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಭಿನಯದ ಸ್ನೇಹನಾ ಪ್ರೀತಿನಾ, ಅರ್ಜುನ ಚಿತ್ರವನ್ನು ಶಾಹುರಾಜ್ ಶಿಂಧೆ ನಿರ್ದೇಶಿಸಿದ್ದರು.

ವಿಶೇಷ ಅಂದ್ರೆ, 8 ವರ್ಷಗಳ ಸುಧೀರ್ಘ ವಿರಾಮದ ನಂತರ ಆಶು ಜೊತೆಗೆ ಚಿತ್ರ ಮಾಡುತ್ತಿದ್ದಾರೆ. ಚೂರಿಕಟ್ಟೆ ಖ್ಯಾತಿಯ ಪ್ರವೀಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಂಗಮಂದಿರ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಶ್ರೃತಿ ಪ್ರಕಾಶ್ , ಅನುಪಮಗೌಡ ಜೊತೆಗೆ ಮತ್ತೊಬ್ಬ ನಾಯಕಿಯ ಹುಡುಕಾಟ ನಡೆಸಲಾಗುತ್ತಿದೆ.  ಉಳಿದಂತೆ ತೆಲಗು ನಟ ಸುಮನ್, ರಂಗಾಯಣ ರಘು ಮತ್ತು ಅಚ್ಯುತ್ ಕುಮಾರ್  ಅಭಿನಯಿಸುತ್ತಿದ್ದು, ಜೆಸ್ಸಿ ಗಿಪ್ಟ್ ಸಂಗೀತ ಸಂಯೋಜನೆ ಕಾರ್ಯ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com