ಮತ್ತೆ ತೆರೆ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್, ಪ್ರೀತಂ ಗುಬ್ಬಿ ಜೋಡಿ ಮ್ಯಾಜಿಕ್!

ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ಜೋಡಿ ಮತ್ತೆ ತೆರೆ ಮೇಲೆ ಮ್ಯಾಜಿಕ್ ಮಾಡಲು ರೆಡಿಯಾಗುತ್ತಿದೆ...
ಗಣೇಶ್, ಪ್ರೀತಂ ಗುಬ್ಬಿ
ಗಣೇಶ್, ಪ್ರೀತಂ ಗುಬ್ಬಿ
ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ಜೋಡಿ ಮತ್ತೆ ತೆರೆ ಮೇಲೆ ಮ್ಯಾಜಿಕ್ ಮಾಡಲು ರೆಡಿಯಾಗುತ್ತಿದೆ. 
ಹೌದು, ಈ ಸೂಪರ್ ಹಿಟ್ ಜೋಡಿ ಇದೀಗ ಮರೆಯುವ ಮುನ್ನ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ. ಗಣೇಶ್ ಚತುರ್ಥಿ ಹಬ್ಬದ ದಿನ ಚಿತ್ರದ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ. 
ಚಿತ್ರದ ಕುರಿತಂತೆ ಮಾತನಾಡಿರುವ ಪ್ರೀತಂ ಗುಬ್ಬಿ, ಮರೆಯುವ ಮುನ್ನ ಚಿತ್ರದ ಚಿತ್ರಕಥೆ ಕುರಿತಂತೆ ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದೆ. ಇದು ಸಂಪೂರ್ಣ ರೊಮ್ಯಾಂಟಿಕ್ ಚಿತ್ರಕಥೆ ಹೊಂದಿದೆ. ಈ ಚಿತ್ರದಲ್ಲಿನ ನಾಯಕನ ಪಾತ್ರ ಗಣೇಶ್ ಅವರಿಗೆ ಹೇಳಿ ಮಾಡಿಸಿದಂತಿದೆ ಎಂದು ಹೇಳಿದ್ದಾರೆ. 
ಗಣೇಶ್ ಅವರು ಸದ್ಯ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು ಈ ಚಿತ್ರಗಳ ಚಿತ್ರೀಕರಣ ಮುಗಿದ ನಂತರ ಮರೆಯುವ ಮುನ್ನ ಚಿತ್ರದ ಕೆಲಸ ಶುರುವಾಗಲಿದೆ ಎಂದರು.
ಸದ್ಯ ಗಣೇಶ್ ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್, ನಾಗಣ್ಣ ನಿರ್ದೇಶನದ ಗಿಮಿಕ್, ನಂತರ ವಿಜಯ್ ನಾಗೇಂದ್ರ ಪಾದಾರ್ಪಣೆ ಗೀತಾ ಚಿತ್ರದ ನಂತರ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com