ಕಿರಿಕ್ ಪಾರ್ಟಿ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಜೋಡಿಯ ಬ್ರೇಕಪ್ ನಂತರ ಇದೀಗ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ರಕ್ಷಿತ್ ಶೆಟ್ಟಿ ಸದ್ಯ ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದ ತೆನಾಲಿ ಚಿತ್ರದಲ್ಲಿ ರಕ್ಷಿತ್ ಅಭಿನಯಿಸಲಿದ್ದಾರೆ.
ಸದ್ಯ ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ಹೇಮಂತ್ ರಾವ್ ಕವಲುದಾರಿ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಈ ಚಿತ್ರಗಳ ನಂತರ ತೆನಾಲಿ ಚಿತ್ರ ಸೆಟ್ಟೇರಲಿದೆ.
'Tenali' is still an idea & has a long way to go. I will only start writing once I'm done with @KavaludaariFilm, it's still too early to say when Tenali will begin his adventure but whenever it happens, the film will see the 3 of us @PUSHKARA11#Rakshit & I work together again pic.twitter.com/DgrPP7sRpK
ತೆನಾಲಿ ಚಿತ್ರದಲ್ಲಿನ ರಕ್ಷಿತ್ ಶೆಟ್ಟಿಯ ಫಸ್ಟ್ ಲುಕ್ ಹೇಗಿರಲಿದೆ ಎಂಬುದನ್ನು ನಿರ್ದೇಶಕ ಹೇಮಂತ್ ರಾವ್ ಬಹಿರಂಗಪಡಿಸಿದ್ದಾರೆ. ಫಸ್ಟ್ ಲುಕ್ ನಲ್ಲಿ ರಕ್ಷಿತ್ ಶೂಟ್ ಮತ್ತು ಕ್ಯಾಪ್ ಧರಿಸಿ ಜೇಮ್ಸ್ ಬಾಂಡ್ ರಂತೆ ಕಾಣುತ್ತಿದ್ದಾರೆ.