ಆದಿತಿ ಪ್ರಭುದೇವ
ಆದಿತಿ ಪ್ರಭುದೇವ

ದಿಲ್ಮಾರ್ ಚಿತ್ರತಂಡ ಸೇರಿಕೊಂಡ ಆದಿತಿ ಪ್ರಭುದೇವ

ಕೆಜಿಎಫ್ ಮತ್ತು ರಾಬರ್ಟ್ ಚಿತ್ರಗಳ ಸಂಭಾಷಣೆಗಾರ ಎಂ ಚಂದ್ರಮೌಳಿ ಅವರು ಇದೀಗ ನಿರ್ದೇಶನಕ್ಕೆ ಕೈಹಾಕಿದ್ದಾರೆ. ದಿಲ್ಮಾರ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಆದಿತಿ ಪ್ರಭುದೇವ ಎಂಟ್ರಿಕೊಟ್ಟಿದ್ದಾರೆ.

ಕೆಜಿಎಫ್ ಮತ್ತು ರಾಬರ್ಟ್ ಚಿತ್ರಗಳ ಸಂಭಾಷಣೆಗಾರ ಎಂ ಚಂದ್ರಮೌಳಿ ಅವರು ಇದೀಗ ನಿರ್ದೇಶನಕ್ಕೆ ಕೈಹಾಕಿದ್ದಾರೆ. ದಿಲ್ಮಾರ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಆದಿತಿ ಪ್ರಭುದೇವ ಎಂಟ್ರಿಕೊಟ್ಟಿದ್ದಾರೆ.

ದಿಲ್ಮಾರ್ ಚಿತ್ರವನ್ನು ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಿಸಲಾಗುತ್ತಿದೆ. ನವನಾಯಕ ರಾಮ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 

ದಿಲ್ಮಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ತೆಲುಗಿನ ನಟಿ ಡಿಂಪಲ್ ಹಯಾತಿ ಈ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಆದಿತಿ ಪ್ರಭುದೇವ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಚಿತ್ರವನ್ನು ನಾಗರಾಜ್ ಭದ್ರಾವತಿ ನಿರ್ಮಿಸುತ್ತಿದ್ದಾರೆ. ಗಿರೀಶ್ ಆರ್ ಗೌಡ ಅವರ ಛಾಯಾಗ್ರಹಣವಿದ್ದು ರಾಧನ್ ಎಂಬುವರು ಸಂಗೀತ ಸಂಯೋಜಿಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com