ಮಾಡಿದ್ದುಣ್ಣೊ ಮಾರಾಯ: ಬಿಜೆಪಿ ಗೆಲುವಿನ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಯಿಸಿದ್ದು ಹೀಗೆ

ಮಾಡಿದ್ದುಣ್ಣೊ ಮಾರಾಯ: ಬಿಜೆಪಿ ಗೆಲುವಿನ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಯಿಸಿದ್ದು ಹೀಗೆ

ರಾಜ್ಯ ವಿಧಾನಸಬೆ ಉಪ ಚುನಾವಣೆಯಲ್ಲಿ ಬಿಜೆಪಿ ಹನ್ನೆರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲಿ ಸ್ಯಾಂಡಲ್ ವುಡ್, ನಟ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಯಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಟ್ವೀಟ್ ಮಾಡಿ ಬೆನ್ನಿಗೆ ಚೂರಿ ಇರಿದವರು ಮತ್ತೆ ಗೆದ್ದು ಬಂದಿದ್ದಾರೆ. ಅವರು ಬಿಜೆಪಿಗೆ ಧೋಕಾ ಮಾಡುವುದಿಲ್ಲವೆಂದು ನಂಬಿದ್ದೇನೆ ಎಂದು...
Published on

ಬೆಂಗಳೂರು: ರಾಜ್ಯ ವಿಧಾನಸಬೆ ಉಪ ಚುನಾವಣೆಯಲ್ಲಿ ಬಿಜೆಪಿ ಹನ್ನೆರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲಿ ಸ್ಯಾಂಡಲ್ ವುಡ್, ನಟ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಯಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಟ್ವೀಟ್ ಮಾಡಿ ಬೆನ್ನಿಗೆ ಚೂರಿ ಇರಿದವರು ಮತ್ತೆ ಗೆದ್ದು ಬಂದಿದ್ದಾರೆ. ಅವರು ಬಿಜೆಪಿಗೆ ಧೋಕಾ ಮಾಡುವುದಿಲ್ಲವೆಂದು ನಂಬಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

"ಉಪಚುನಾವಣೆ ಫಲಿತಾಶ-ಕರ್ನಾಟಕಕ್ಕೆ ಧನ್ಯವಾದಗಳು, ಬೆನ್ನಿಗೆ ಇರಿದವರು ಮತ್ತೆ ಜಯಗಳಿಸಿದ್ದಾರೆ.ಅವರು ಮತ್ತೊಮ್ಮೆ ಬಿಜೆಪಿ ತಿರುಗಿ ಹೊಡೆಯುವುದಿಲ್ಲ ಎಮ್ದು ನಂಬಿದ್ದೇನೆ. 

"ಅನರ್ಹರಿಗೆ ಮಣೆ ಹಾಕಿದ್ದೀರಿ...ಒಳಿತಾಗಲಿ...””ಮಾಡಿದ್ದುಣ್ಣೊ ಮಾರಾಯ””ಈ ಮಾತು ಯಾರಿಗೆ ಅನ್ವಯಿಸುತ್ತೊ ಕಾದು ನೊಡೋಣ" ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಟ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿ "ನಲ್ಮೆಯ ನಾಯಕರು ಯಡಿಯೋರಪ್ಪಜೀ ರವರ ಗೆಲುವಿನಲ್ಲಿ ಭಾಗಿಯಾಗಿ ಸಂತೋಷ ಹಂಚಿಕೊಂಡ ಕ್ಷಣ.. ಧನ್ಯವಾದಗಳು ನಮಗೆ ಶಕ್ತಿ ನೀಡಿದ ಮತದಾರ ಬಂಧುಗಳಿಗೆ..ರಾಷ್ಟ್ರ ರಾಜ್ಯದ ಏಕಮೇವ ಸರ್ಕಾರದಲ್ಲಿ ಅಭಿವೃದ್ಧಿಯ ಸುವರ್ಣಯುಗ ಸ್ಥಾಪನೆಪರ್ವ ಇಂದಿನಿಂದ.. ಶುಭಮಸ್ತು." ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com