ತಮಿಳುನಾಡು ಹಾಗೂ ಕೇರಳದಲ್ಲಿ ಜಾತಿಯತೆಯನ್ನು ನಿರ್ಮೂಲನೆಗೊಳಿಸುವಲ್ಲಿ ಪ್ರೇಮ ವಿವಾಹ ಪರ್ಯಾಯ ಮಾರ್ಗ ಎಂದು ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಹೇಳಿದ್ದಾರೆ.
ಮಲಯಾಳಂನ ಸಾಪ್ತಾಹಿಕವೊಂದಕ್ಕೆ ಸೇತುಪತಿ ನೀಡಿರುವ ಸಂದರ್ಶನದಲ್ಲಿ ತಮಿಳುನಾಡು ಹಾಗೂ ಕೇರಳ ತನ್ನ ಸ್ವಂತ ಸ್ಥಳವೆಂದು ಭಾವಿಸಿದ್ದು, ಈ ಎರಡೂ ರಾಜ್ಯಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದಾರೆ.
ಪ್ರಗತಿಪರ ಚಿಂತನೆಗಳ ವಿರುದ್ಧ ಮಾತನಾಡುವ ಜನರನ್ನು ಸಹ ವಿಜಯ್ ಸೇತುಪತಿ ಟೀಕಿಸಿದ್ದಾರೆ.
ಇನ್ನೂ #ಮೀಟೂ, ಹಲ್ಲೆಗಳ ವಿರುದ್ಧ ಧ್ವನಿ ಎತ್ತುವ ಪ್ರಮುಖ ಆಸ್ತ್ರವಾಗಿದೆ. ಇದರಿಂದ ಸಕಾರಾತ್ಮಕವಾದ ಬದಲಾವಣೆಯಾಗಲಿದೆ. 10 ವರ್ಷಗಳ ಹಿಂದೆ ನಡೆದಿದ್ದ ಅಪರಾಧಗಳ ಬಗ್ಗೆ ಜನರು ಮಾತನಾಡುವುದರಿಂದ ಅಪರಾಧಿಗಳು ಈಗಲೂ ಭಯಪಡುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.