ಖ್ಯಾತ ಕನ್ನಡ ಚಿತ್ರ ನಿರ್ಮಾಪಕಿ ಜಯಶ್ರೀ ದೇವಿ ವಿಧಿವಶ

ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಹಬ್ಬ, ಹಾಗೂ ಇತ್ತೀಚೆಗೆ ತೆರೆಕಂಡ ಮುಕುಂದ-ಮುರಾರಿ ಸಿನಿಮಾ ಗಳಂತ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ..
ಜಯಶ್ರೀದೇವಿ
ಜಯಶ್ರೀದೇವಿ
Updated on
ಬೆಂಗಳೂರು: ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಹಬ್ಬ, ಹಾಗೂ ಇತ್ತೀಚೆಗೆ ತೆರೆಕಂಡ ಮುಕುಂದ-ಮುರಾರಿ ಸಿನಿಮಾ ಗಳಂತ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ನಿರ್ಮಾಪಕಿ ಜಯಶ್ರೀ ದೇವಿ ವಿಧಿವಶರಾಗಿದ್ದಾರೆ. 
60 ವರ್ಷದ ಜಯಶ್ರೀ ದೇವಿ ಹೃದಯಾಘಾತದಿಂದಾಗಿ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. 
ಭವಾನಿ, ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಶ್ರೀ ಮಂಜುನಾಥ, ನಿಶ್ಯಬ್ದ, ಕೋಣ ಈದೈತೆ, ಸ್ನೇಹ ಲೋಕ, ಮುಂತಾದ ಜನಪ್ರಿಯ ಚಿತ್ರಗಳನ್ನು ಜಯಶ್ರೀದೇವಿ ಬೆಳ್ಳಿತೆರೆಗೆ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮುಕುಂದ ಮುರಾರಿ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು. ತಮ್ಮ ಬ್ಯಾನರ್ ನಲ್ಲಿ ಸುಮಾರು 20ಸಿನಿಮಾ ನಿರ್ಮಾಣ ಮಾಡಿದ್ದರು.
ಜಯಶ್ರೀದೇವಿ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನಟ,ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.  
ನಾಳೆ ಬೆಳಗ್ಗೆ ಯಲಹಂಕದಲ್ಲಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿರುವುದಾಗಿ ಜಯಶ್ರೀದೇವಿಯವರ ದತ್ತು ಪುತ್ರ ವಾಸು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com