ಮಾಣಿಕ್ಯ ನಂತರ ರಣಂ ಮೂಲಕ ಕನ್ನಡಕ್ಕೆ ವರಲಕ್ಷ್ಮಿ ಶರತ್ ಕುಮಾರ್ ವಾಪಸ್

ವಿ.ಸಮುದ್ರ ನಿರ್ದೇಶನದ ರಣಂ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದ್ದು, ದಕ್ಷಿಣ ಭಾರತದ ನಟಿ ವರಲಕ್ಷ್ಮಿ ಶರತ್ ಕುಮಾರ್ ಪಾತ್ರ ನಿರ್ವಹಿಸಿದ್ದಾರೆ...
ವರಲಕ್ಷ್ಮಿ ಶರತ್ ಕುಮಾರ್
ವರಲಕ್ಷ್ಮಿ ಶರತ್ ಕುಮಾರ್
Updated on
ವಿ.ಸಮುದ್ರ ನಿರ್ದೇಶನದ ರಣಂ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದ್ದು, ದಕ್ಷಿಣ ಭಾರತದ ನಟಿ  ವರಲಕ್ಷ್ಮಿ ಶರತ್ ಕುಮಾರ್ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಸಿಬಿಐ  ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ, ಕ್ರಾಂತಿಕಾರಿ ಪಾತ್ರದಲ್ಲಿ ಚೇತನ್ ಮತ್ತು ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಚಿರಂಜೀವಿ ಸರ್ಜಾ ನಟಿಸುತ್ತಿದ್ದಾರೆ.
ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ವರಲಕ್ಷ್ಮಿ, ವಿಸ್ಮಯ ನಂತರ ಮೂರನೇ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಮತ್ತೊಬ್ಬ ನಟ ದೇವ್ ಗಿಲ್ ಕೂಡ ನಟಿಸುತ್ತಿದ್ದಾರೆ. ಮಿನರ್ವ ಮಿಲ್ಸ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಇಬ್ಬರು ಭಾಗಿಯಾಗಿದ್ದಾರೆ. ಕಲಾ ನಿರ್ದೇಶಕ ಶ್ರೀನಿವಾಸ್ ಸಿನಿಮಾಗಾಗಿ ಮಿನರ್ವ ಮಿಲ್ಸ್ ನಲ್ಲಿದೊಡ್ಡ ಸೆಟ್ ಹಾಕಿದ್ದಾರೆ.
ವರಲಕ್ಷ್ಮಿ ಮತ್ತು ದೇವ್ ಸೆಟ್ ನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ, ಆರ್ಎಸ್ ಪ್ರೊಡಕ್ಷನ್ ಅಡಿಯಲ್ಲಿ ಆರ್ ,ಎಸ್ ಶ್ರೀನಿವಾಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ,  ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದು, ಪ್ರತಿದಿನ  ಸಾಹಸ ಸನ್ನಿವೇಶಗಳಿಗಾಗಿ  10 ಲಕ್ಷ ರು. ಖರ್ಚಾಗುತ್ತಿದೆ, 9 ದಿನಗಳ ಶೂಟಿಂಗ್ ನಡೆಯಲಿದೆ,  ಭಾನುವಾರದವರೆಗೂ ಶೂಟಿಂಗ್ ನಡೆಯಲಿದೆ.
ಸಮುದ್ರ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ, ಎರಡು ಭಾಷೆಗಳಲ್ಲಿ  ಸಿನಿಮಾ ತಯಾರಾಗುತ್ತಿದೆ, ನೀತುಗೌಡ ಎರಡು ಭಾಷೆಗಳಲ್ಲೂ  ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com