ಕೆಜಿ ರಸ್ತೆಯಲ್ಲಿ ಅನೇಕ ಚಿತ್ರಮಂದಿರಗಳಿದ್ದವು. ಈಗ ಎಲ್ಲವೂ ನೆಲಸಮಗೊಂಡಿವೆ. ನಮ್ಮ ಚಿತ್ರರಂಗದಲ್ಲಿಯೇ ಒಮ್ಮತದ ಯೋಚನೆ ಮತ್ತು ಯೋಜನೆ ಇಲ್ಲ. ಸಿಎಂ ಕಚೇರಿಯಲ್ಲಿಯೇ ಕುಳಿತು ಚಿತ್ರದ ಕಲೆಕ್ಷನ್ ಹೇಳಬಲ್ಲೆ. ಕಥೆ, ಚಿತ್ರಕಥೆ, ಮೇಕಿಂಗ್ ಬಗ್ಗೆ ಗಮನ ಕೊಡಿ. ಜನ ಕಡಿಮೆ ಬಜೆಟ್ ನ ಸಿನಿಮಾನೂ ನೋಡಿ ಗೆಲ್ಲಿಸುತ್ತಾರೆ ಎಂದರು. ಅಲ್ಲದೆ ಇದಕ್ಕೆ ರಿಶಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಉದಾಹರಣೆಯಾಗಿ ನೀಡಿದರು.