ಇನ್ನು ನಿರ್ದೇಶಕ ಶೇಖರ್ ಹಾಗೂ ಪ್ರಜ್ವಲ್ ಜೋಡಿಗೆ ಇದು ಎರಡನೇ ಚಿತ್ರವಾಗಿದೆ. ಇದಕ್ಕೆ ಮುನ್ನ ಈ ಜೋಡಿ "ಅರ್ಜುನ" ಚಿತ್ರದ ಮೂಲಕ ಒಂದಾಗಿತ್ತು."ಇದೊಂದು ಪೂರ್ಣ ಪ್ರಮಾಣದ ಗ್ಯಾಂಗ್ ಸ್ಟರ್ ಚಿತ್ರವಾಗಿರಲಿದೆ, ಮಾಫಿಯಾ ಲೋಕದ ಅನಾವರಣಗೊಳಿಸುವ ಈ ಚಿತ್ರ ರಕ್ತಪಾತದಂತಹಾ ದೃಷ್ಯಗಳ ವೈಭವೀಕರಣವಿಲ್ಲದಿದ್ದರೂ ಸಹ ಬಹಳಷ್ಟು ಗಂಭೀರ ಕಥಾನಕವನ್ನು ಹೊಂದಿರಲಿದೆ." ನಿರ್ದೇಶಕರು ಹೇಳಿದ್ದಾರೆ.