ರಾಧಾ ರಮಣ ಧಾರಾವಾಹಿಯಿಂದ ಹೊರಬಂದ ಶ್ವೇತಾ ಪ್ರಸಾದ್: 'ರಾಧಾ' ಮಿಸ್ ಪಾತ್ರಧಾರಿ ಯಾರು ಗೊತ್ತೆ?

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ‘ರಾಧಾ ರಮಣ’ ಧಾರಾವಾಹಿಯಿಂದ ನಟಿ ಶ್ವೇತಾ ಪ್ರಸಾದ್ ಹೊರಬಂದಿದ್ದಾರೆ, ಅವರ ಬದಲಿಗೆ ಮತ್ತೊಬ್ಬ ...
ಶ್ವೇತಾ ಪ್ರಸಾದ್ ಮತ್ತು ಕಾವ್ಯಾಗೌಡ
ಶ್ವೇತಾ ಪ್ರಸಾದ್ ಮತ್ತು ಕಾವ್ಯಾಗೌಡ
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ‘ರಾಧಾ ರಮಣ’ ಧಾರಾವಾಹಿಯಿಂದ ನಟಿ ಶ್ವೇತಾ ಪ್ರಸಾದ್ ಹೊರಬಂದಿದ್ದಾರೆ, ಅವರ ಬದಲಿಗೆ ಮತ್ತೊಬ್ಬ ಕಿರುತೆರೆ ನಟಿ ಕಾವ್ಯ ಗೌಡ ಅವರು ರಾಧಾ ಮಿಸ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಕೆಲವು ವೈಯಕ್ತಿಕ ಕಾರಣಗಳಿಂದ ರಾಧಾ ರಮಣ ಸೀರಿಯಲ್ ಮುಖ್ಯ ನಟಿ ಶ್ವೇತಾ ಆರ್ ಪ್ರಸಾದ್ ಅವರು ಈ ಧಾರಾವಾಹಿಯಿಂದ ಹೊರಕ್ಕೆ ಹೋಗಿದ್ದಾರೆ. ಈ ಸಂಗತಿಯನ್ನು ಶ್ವೇತಾ ಅವರು ಕ್ಲಿಯರ್ ಹೇಳಿಯೇ ಹೋಗಿದ್ದು, ಅವರ ಬದಲಿಗೆ ನಟಿ ಕಾವ್ಯಾ ಗೌಡ ಆ ಪಾತ್ರವನ್ನು ಮುಂದಕ್ಕೆ ನಿಭಾಯಿಸಲು ಆಯ್ಕೆಯಾಗಿದ್ದಾರೆ. 
ಕಾವ್ಯ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ‘ಶುಭ ವಿವಾಹ’, ‘ಮೀರಾ ಮಾಧವ’ ಹಾಗೂ ‘ಗಾಂಧಾರಿ’ಧಾರಾವಾಹಿಯಲ್ಲಿ ನಟಿಸಿದ್ದರು.
ಧಾರಾವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿತ್ತು. ಹೀಗಾಗಿ ಅವರು ಸೀರಿಯಲ್‍ನಿಂದ ಹೊರಬಂದಿದ್ದಾರೆ. ಶ್ವೇತಾ ಧಾರಾವಾಹಿ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com