ನಿತ್ಯಾನಂದ ಸ್ವಾಮಿ ಜೊತೆಗಿನ ಫೋಟೋ ವೈರಲ್, ಗಾಯಕಿ ಚಿನ್ಮಯಿ ಶ್ರೀಪಾದ್ ಹೇಳಿದ್ದೇನು?

ವಿವಾದಿತ ದೇವ ಮಾನವ ನಿತ್ಯಾನಂದ ಸ್ವಾಮಿ ಕೈಯಿಂದ ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಪ್ರಸಾದ ಸ್ವೀಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಫೋಟೋ ಎಂದು ಸ್ವತಃ ಗಾಯಕಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.  
ಚಿನ್ಮಯಿ ಶ್ರೀಪಾದ್
ಚಿನ್ಮಯಿ ಶ್ರೀಪಾದ್
Updated on

ಚೆನ್ನೈ: ವಿವಾದಿತ ದೇವ ಮಾನವ ನಿತ್ಯಾನಂದ ಸ್ವಾಮಿ ಕೈಯಿಂದ ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಪ್ರಸಾದ ಸ್ವೀಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಫೋಟೋ ಎಂದು ಸ್ವತಃ ಗಾಯಕಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.  


ತಮ್ಮ ಟ್ವಿಟರ್​ ಖಾತೆಯಲ್ಲಿ ಅಸಲಿ ಫೋಟೋ ಮತ್ತು ಎಡಿಟ್​ ಮಾಡಲಾಗಿರುವ ನಕಲಿ ಫೋಟೋವನ್ನು ಪೋಸ್ಟ್​ ಮಾಡಿರುವ ಚಿನ್ಮಯಿ, ವೈರಲ್​ ಆಗಿರುವ ಫೋಟೋ ನಕಲಿ ಎಂದು ಹೇಳಿದರೂ ಇವರೆಲ್ಲಾ ಹೀಗ್ಯಾಕೆ ಮಾಡುತ್ತಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ. ನೀವಿದನ್ನು ಉಚಿತವಾಗಿ ಮಾಡುತ್ತಿದ್ದೀರಾ ಅಥವಾ ಯಾರಿಂದಲಾದರೂ ಹಣ ತೆಗೆದುಕೊಂಡು ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. 


ಚಿನ್ಮಯಿ ಟ್ವೀಟ್​ ಮಾಡುತ್ತಲೇ ಫೋಟೋವನ್ನು ಎಡಿಟ್​ ಮಾಡಿ ಪೋಸ್ಟ್​ ಮಾಡಿದ್ದ ಟ್ವಿಟರ್​ ಬಳಕೆದಾರ ಫೋಟೋವನ್ನು ತೆಗೆದುಹಾಕಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com