'ನನ್ನ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ': ನಿರ್ದೇಶಕ ರಘುರಾಮ್ ಎಚ್ಚರಿಕೆ- ವಿಡಿಯೋ

ಸ್ಯಾಂಡಲ್ ವುಡ್ ನಿರ್ದೇಶಕ ರಘುರಾಮ್ ಗರಂ ಆಗಿದ್ದಾರೆ. ಯುವ ರತ್ನ ಸಿನಿಮಾ ಟೀಸರ್ ಬಗ್ಗೆ ಅವರು ಹಾಕಿದ ಪೋಸ್ಟ್ ಗೆ ಬಂದಿರುವ ನೆಗಟಿವ್ ಪ್ರತಿಕ್ರಿಯೆಗಳಿಂದ ಕೆರಳಿ ಕೆಂಡವಾಗಿದ್ದಾರೆ.
ನಿರ್ದೇಶಕ ರಘುರಾಮ್
ನಿರ್ದೇಶಕ ರಘುರಾಮ್
Updated on

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ರಘುರಾಮ್ ಗರಂ ಆಗಿದ್ದಾರೆ. ಯುವ ರತ್ನ ಸಿನಿಮಾ ಟೀಸರ್ ಬಗ್ಗೆ ಅವರು ಹಾಕಿದ ಪೋಸ್ಟ್ ಗೆ ಬಂದಿರುವ ನೆಗಟಿವ್ ಪ್ರತಿಕ್ರಿಯೆಗಳಿಂದ ಕೆರಳಿ ಕೆಂಡವಾಗಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿರುವ ರಘುರಾಮ್,  ತನ್ನ ಬಗ್ಗೆ ಯಾರು ಎಷ್ಟೇ ಬೇಕಾದರೂ ಟೀಕೆ ಮಾಡಲು ಅವಕಾಶವಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಅದರಲ್ಲಿ ನನ್ನ ತಾಯಿ ಬಗ್ಗೆ ಮಾತನಾಡುವುದು ಸರಿಯಲ್ಲ.ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಪ್ರತಿಕ್ರಿಯೆಗಳನ್ನು ನೀಡುವಾಗ ಮನೆಯವರನ್ನು ಎಳೆದು ತರುವವರ ವಿರುದ್ದ ಸೂಕ್ತ ಕಾನೂನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲವರ ಕಾಮೆಂಟ್ ಗಳಲ್ಲಿ ಮನೆಗೆ ಬಂದು ಹೊಡಿತ್ತೀವಿ ಎಂದವರಿಗೂ ಕೂಡಾ ಅಡ್ರೆಸ್ ನೀಡುತ್ತೀನಿ. ನಿಮ್ಮಂತೆ ಮಾತನಾಡುವುದು ನಮ್ಮ ಸಂಸ್ಕೃತಿ ಅಲ್ಲ ಎಂದಿರುವ ಅವರು, ನನ್ನ ತಾಯಿ ಬಗ್ಗೆ ಮಾತನಾಡಿರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com