'ಆಸ್ಕರ್' ಪ್ರಶಸ್ತಿ ದಯಾಳ್ ಬಿಗ್ ಬಯಕೆ!

ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ’ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಕನಸೇನು ಗೊತ್ತೇ? ಆಸ್ಕರ್ ಪ್ರಶಸ್ತಿ ಪಡೆಯಬಲ್ಲ ಚಿತ್ರ ನಿರ್ಮಿಸುವುದು!
'ಆಸ್ಕರ್' ಪ್ರಶಸ್ತಿ ದಯಾಳ್ ಬಿಗ್ ಬಯಕೆ!
'ಆಸ್ಕರ್' ಪ್ರಶಸ್ತಿ ದಯಾಳ್ ಬಿಗ್ ಬಯಕೆ!
Updated on

ಬೆಂಗಳೂರು: ಅವಕಾಶ ಆಕಾಶದಾಚೆಗೂ ವ್ಯಾಪಿಸಬಹುದು, ಕನಸಿನ ಹಕ್ಕಿಗೆ ರೆಕ್ಕೆ ಮೂಡಿದರೆ ಇಚ್ಛೆಯಿದ್ದೆಡಿಗೆ ಹಾರಬಹುದು ಅಲ್ಲವೇ?  ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ಮಿಸಿ, ಪ್ರಸ್ತುತ ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ’ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಕನಸೇನು ಗೊತ್ತೇ? ಆಸ್ಕರ್ ಪ್ರಶಸ್ತಿ ಪಡೆಯಬಲ್ಲ ಚಿತ್ರ ನಿರ್ಮಿಸುವುದು!

ಮಹಿಳಾ ಪ್ರಧಾನ ಚಿತ್ರ ’ರಂಗನಾಯಕಿ’ ಯ ಅಧಿಕೃತ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಚಿತ್ರ ನವೆಂಬರ್ ೨೪ರಂದು ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡುವುದರ ಜತೆಗೆ, ತಮ್ಮ ಕನಸನ್ನೂ ಹಂಚಿಕೊಂಡಿದ್ದಾರೆ. ಈ ಹಿಂದೆ ಹಗ್ಗದ ಕೊನೆ, ಆಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ  ಆದರೆ ಈಗ ’ರಂಗನಾಯಕಿ’ ಯ ಮೂಲಕ ಸಫಲವಾಯಿತು  ಆದರೆ ಆಸ್ಕರ್ ಪ್ರಶಸ್ತಿ ಪಡೆಯುಬೇಕು ಎಂಬುದು ನನ್ನ ಬಹುದೊಡ್ಡ ಕನಸು ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com