ಗಾಳಿಪಟ 2 ನಿರ್ಮಾಣದಿಂದ ಹೊರ ಬಂದ ಮಹೇಶ್, ರಮೇಶ್ ರೆಡ್ಡಿ ಹೊಸ ಸಾರಥಿ!

ಗಾಳಿಪಟ 2 ಟೆಕ್ ಆಫ್ ನಂತರ ಹಲವು ಬದಲಾವಣೆಗಳು ಆಗುತ್ತಲೇ ಇವೆ. ಇದೀಗ ಚಿತ್ರದ ನಿರ್ಮಾಪಕ ಮಹೇಶ್ ದನನ್ನಾವರ್ ಚಿತ್ರದಿಂದ ಹೊರಬಂದಿದ್ದು ರಮೇಶ್ ರೆಡ್ಡಿ ಬಂಡವಾಳ ಹೂಡಲು ಮುಂದಾಗಿದ್ದಾರೆ.
ಗಾಳಿಪಟ
ಗಾಳಿಪಟ
Updated on

ಗಾಳಿಪಟ 2 ಟೆಕ್ ಆಫ್ ನಂತರ ಹಲವು ಬದಲಾವಣೆಗಳು ಆಗುತ್ತಲೇ ಇವೆ. ಇದೀಗ ಚಿತ್ರದ ನಿರ್ಮಾಪಕ ಮಹೇಶ್ ದನನ್ನಾವರ್ ಚಿತ್ರದಿಂದ ಹೊರಬಂದಿದ್ದು ರಮೇಶ್ ರೆಡ್ಡಿ ಬಂಡವಾಳ ಹೂಡಲು ಮುಂದಾಗಿದ್ದಾರೆ.

ನವೆಂಬರ್ ಮಧ್ಯಭಾಗದಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು ಸದ್ಯ ತಾರಾಗಣ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದೆ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. 

ಗಣೇಶ್ ಮತ್ತು ದಿಗಂತ್ ಬದಲಿಗೆ ಶರಣ್ ಮತ್ತು ರಿಷಿಯನ್ನು ತರಬೇಕೆಂದು ಚಿತ್ರ ತಂಡ ತೀರ್ಮಾನಿಸಿತ್ತು. ಆದರೆ ಮತ್ತೆ ಗಣೇಶ್ ಮತ್ತು ದಿಗಂತ್ ಗೆ ಚಿತ್ರತಂಡ ಮಣೆ ಹಾಕಿದೆ. ಆದರೆ ರಾಜೇಶ್ ಕೃಷ್ಣನ್ ಬದಲಿಗೆ ಪವನ್ ಕುಮಾರ್ ರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ.

ಉಪ್ಪು ಹುಳಿ ಖಾರ, ಪಡ್ಡೆಹುಲಿ ಮತ್ತು ನಾತಿಚರಾಮಿ ಚಿತ್ರವನ್ನು ನಿರ್ಮಿಸಿದ್ದ ರಮೇಶ್ ರೆಡ್ಡಿ ಇದೀಗ ರಮೇಶ್ ಅರವಿಂದ್ ಅಭಿನಯದ 100 ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು ಇದೀಗ ಗಾಳಿಪಟ 2 ಚಿತ್ರವನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com