ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಮುಂದಿನ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕನಾಗಿದ್ದು, ಪ್ರಸನ್ನ ಸಿನಿಮಾ ನಿರ್ಮಾಣ ಮಾಡುವುದು ಖಚಿತವಾಗಿದೆ. ಆಗಸ್ಟ್ 28 ರಂದು ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ.
ಗಣೇಶ ಮೆಡಿಕಲ್ಸ್ ಎಂಬ ಟೈಟಲ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಇದರ ಜೊಕತೆಗೆ ಮತ್ತೊಂದು ಕಥೆಯನ್ನು ಸಿದ್ಧಪಡಿಸುತ್ತಿದ್ದು, ಅದರ ಬಗ್ಗೆ ಯಾವ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ವಿಜಯ್ ಪ್ರಸಾದ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ, ಅವರ ಕಥೆ. ಸಂಭಾಷಣೆಯಲ್ಲಿ ಬಿಗಿ ಹಿಡಿತವಿದೆ ಎಂದು ನೀನಾಸಂ ಸತೀಶ್ ಹೇಳಿದ್ದಾರೆ.
ನಿರ್ಮಾಪಕ ಪ್ರಸನ್ನ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಈ ಮೊದಲು ನೀರ್ ದೋಸೆ ಸಿನಿಮಾ ಮಾಡಿದ್ದರು.,ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸತೀಶ್ ಸಹ ನಿರ್ಮಾಪಕನಾಗಿದ್ದಾರೆ,
ವಿಜಯ್ ಪ್ರಸಾದ್ ಸದ್ಯ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ,. ಸತೀಶ್ ಚಂದ್ರ ಮೋಹನ್ ನಿರ್ಮಾಣದ ಬ್ರಹ್ಮಚಾರಿ ಸಿನಿಮಾ ಮುಗಿಸಿದ್ದಾರೆ.
Advertisement