ಡಿಸೆಂಬರ್ 6 ರಂದು ಪ್ರಪಂಚದಾದ್ಯಂತ 'ಅಳಿದು ಉಳಿದವರು' ರಿಲೀಸ್

ಅಶು ಬೆದ್ರ ವೆಂಚರ್ ಲಾಂಛನದಲ್ಲಿ ಅಶು ಬೆದ್ರ ಅವರು ನಿರ್ಮಿಸಿರುವ ಅಳಿದು ಉಳಿದವರು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 
ಅಳಿದು-ಉಳಿದವರು ಪೋಸ್ಟರ್
ಅಳಿದು-ಉಳಿದವರು ಪೋಸ್ಟರ್

ಬೆಂಗಳೂರು: ಅಶು ಬೆದ್ರ ವೆಂಚರ್ ಲಾಂಛನದಲ್ಲಿ ಅಶು ಬೆದ್ರ ಅವರು ನಿರ್ಮಿಸಿರುವ ಅಳಿದು ಉಳಿದವರು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

ಅರವಿಂದ್ ಶಾಸ್ತ್ರಿ ನಿರ್ದೇಶನದ ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಕಾಸರಗೋಡು, ಅರವಿಂದ್ ಕಶ್ಯಪ್ ಹಾಗು ಅಭಿನ್ ರಾಜೇಶ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಅವರ ಸಂಕಲನ ಈ ಚಿತ್ರಕ್ಕಿದೆ. ಸುಧೀರ್ ಶ್ಯಾನಭೋಗ್ ಅವರ ಕಥೆಗೆ ಪ್ರವೀಣ್ ಕುಮಾರ್ ಹಾಗೂ ಪವನ್ ಭಟ್ ಸಂಭಾಷಣೆ ಬರೆದಿದ್ದಾರೆ.

ಅಶು ಬೆದ್ರ, ಸಂಗೀತ ಭಟ್, ಅತುಲ್ ಕುಲಕರ್ಣಿ, ಶೀಲಂ, ಬಿ.ಸುರೇಶ್, ದಿನೇಶ್ ಮಂಗಳೂರು, ಧರ್ಮಣ್ಣ, ಅಶೋಕ್ ರಾವ್, ಅರವಿಂದ್ ರಾವ್, ಸ್ವಾತಿ ಗುರುದತ್, ಪವನ್ ಕುಮಾರ್, ನಾಗೇಂದ್ರ ಶಾ, ಈ ಟಿವಿ ಶ್ರೀಧರ್, ಹನುಮಂತೇ ಗೌಡ, ಸುಧಾಕರ್, ರವಿ ಭಟ್, ಸ್ಪಂದನ, ವಿಶ್ವನಾಥ್, ಚಾರ್ಲಿ ಮುಂತಾದವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com