ಎಲ್ಲಿಗೆ ಪಯಣ ಯಾವುದೋ ದಾರಿ: ಕಾಶೀನಾಥ್ ಪುತ್ರನಿಗೆ  ಸ್ಪೂರ್ತಿ ಉದಿಮನೆ-ವಿಜಯಶ್ರೀ ಜೋಡಿ

ಕಾಶೀನಾಥ್ ಪುತ್ರ ಅಭಿಮನ್ಯು ನಟನೆಯ 'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದೆ.
ಅಭಿಮನ್ಯು ಜೊತೆ ನಾಯಕಿಯರು
ಅಭಿಮನ್ಯು ಜೊತೆ ನಾಯಕಿಯರು

ಕಾಶೀನಾಥ್ ಪುತ್ರ ಅಭಿಮನ್ಯು ನಟನೆಯ 'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದೆ. 

ನಿರ್ದೇಶಕ ಕಿರಣ್ ಸೂರ್ಯ, ನಿರ್ಮಾಪಕರಾದ ನಂದೀಶ್ ಗೌಡ ಮತ್ತು ಜಿತಿನ್ ಜಿ ಪಟೇಲ್ ಹಾಗೂ 'ಮಮ್ಮಿ', 'ದೇವಕಿ' ಸಿನಿಮಾಗಳ ನಿರ್ದೇಶಕ ಲೋಹಿತ್ ಹಾಜರಿದ್ದರು.

ಬೆಂಗಳೂರು, ಮೈಸೂರು, ಮಡಿಕೇರಿ ಭಾಗಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಇದೆ. ಈಗಾಗಲೇ ಹಾಡಿನ ರೆಕಾರ್ಡಿಂಗ್ ಕೆಲಸಗಳು ಶುರು ಆಗಿವೆ. ಜನವರಿ ತಿಂಗಳಿನಲ್ಲಿ ಅಭಿಮನ್ಯು ಫಸ್ಟ್ ಲುಕ್ ಹೊರಬರಲಿದೆ. ಎಂದು ಕಿರಣ್ ತಿಳಿಸಿದ್ದಾರೆ. ಸುದರ್ಶನ ಆರ್ಟ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಅಭಿಮನ್ಯು ಜೋಡಿಯಾಗಿ ಸ್ಫೂರ್ತಿ ಉಡಿಮನೆ ಹಾಗೂ ವಿಜಯ ಶ್ರೀ ನಾಯಕಿಯರಾಗಿದ್ದಾರೆ. 7 ವರ್ಷಗಳ ನಂತರ ಕಾಶೀನಾಥ್ ಮಗ ಕಮ್ ಬ್ಯಾಕ್ ಮಾಡಿದ್ದಾರೆ.

ಅಭಿಮನ್ಯು ಪ್ರಸಿದ್ದ ನಿರ್ದೇಶಕ ಕಾಶೀನಾಥ್ ಅವರ ಪುತ್ರ, ಈ ಮೊದಲು ಬಾಜಿ ಸಿನಿಮಾ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು. 1 ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com