ಕೆಜಿಎಫ್ ಯಶಸ್ಸಿನ ಹಿಂದೆ ನಿರ್ಮಾಪಕ ವಿಜಯ್ ಕಿರಂಗದೂರು ಮತ್ತು ನಟ ಯಶ್ ಶ್ರಮ ಹೆಚ್ಚಿದೆ, ನಮ್ಮ ನಿಯಮಿತ ಗಡಿ ದಾಟಿ ಮುಂದೆ ಹೋಗಲು ಕಾರಣರಾಗಿದ್ದಾರೆ, ಭಾರತೀಯ ಪ್ರೇಕ್ಷಕರು ಕೆಜಿಎಫ್ ಸಿನಿಮಾವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಒಪ್ಪುತ್ತಾರೆ ಎಂದು ನನಗೆ ನಂಬಿಕೆಯಿರಲಿಲ್ಲ, ಸಿನಿಮಾ ಲುಕ್, ಟ್ರೇಲರ್ ಹೆಚ್ಚಿನ ಕೆಲಸ ಮಾಡಿದೆ, ಮಾರುಕಟ್ಟೆಯಲ್ಲಿ ಪ್ರಾಡಕ್ಟ್ ಮಾರಾಟವಾಗಲು ಅವರು ಹೆಚ್ಚಿನ ಸಹಾಯ ಮಾಡಿದ್ದಾರೆ. ಕೇವಲ ನಿರ್ಮಾಪಕ ಮತ್ತು ನಟರಾಗಿ ಅವರು ತಮ್ಮ ಕೆಲಸವನ್ನು ಸೀಮಿತಗೊಳಿಸಿರಲಿಲ್ಲ,ಅದಕ್ಕಿಂತಲೂ ಹೆಚ್ಚಿನ ಪಾತ್ರ ವಹಿಸಿದ್ದಾರೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.,