ಜಾತ್ರೆ ದೃಶ್ಯದ ಮೂಲಕ ಕುತೂಹಲ ಮೂಡಿಸಿದೆ ಶ್ರೀಮುರಳಿಯ ಮದಗಜ ಟೀಸರ್
ಶ್ರೀಮುರಳಿ ನಾಯಕನಾಗಿರುವ "ಮದಗಜ" ಚಿತ್ರದ ಶೀರ್ಹಿಕೆ ಬಹಿರಂಗವಾದಂದಿನಿಂದಲೂ ಸಾಕಷ್ಟು ನಿರೀಕ್ಷೆ, ಕುತೂಹಲ ಮೂಡಿಸಿದ್ದು ಇದೀಗ ಚಿತ್ರ ನಿರ್ದೇಶಕ ಮಹೇಶ್ ಕುಮಾರ್ ಚಿತ್ರದ ಮೋಷನ್ ಟೀಸರ್....
ಬೆಂಗಳೂರು: ಶ್ರೀಮುರಳಿ ನಾಯಕನಾಗಿರುವ "ಮದಗಜ" ಚಿತ್ರದ ಶೀರ್ಹಿಕೆ ಬಹಿರಂಗವಾದಂದಿನಿಂದಲೂ ಸಾಕಷ್ಟು ನಿರೀಕ್ಷೆ, ಕುತೂಹಲ ಮೂಡಿಸಿದ್ದು ಇದೀಗ ಚಿತ್ರ ನಿರ್ದೇಶಕ ಮಹೇಶ್ ಕುಮಾರ್ ಚಿತ್ರದ ಮೋಷನ್ ಟೀಸರ್ ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಲಿದ್ದಾರೆ.
ಚಿತ್ರದ ಮೋಷನ್ ಟೀಸರ್ ಇಂದು (ಜನವರಿ 26) ಬಿಡುಗಡೆಯಾಗಲಿದ್ದು ಟೀಸರ್ ಸುಮಾರು ಒಂದೂವರೆ ನಿಮಿಷಗಳಷ್ಟಿದೆ. ಇದರಲ್ಲಿ ಅಯೋಗ್ಯ ಚಿತ್ರದ ನಿರ್ದೇಶಕ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಜಾತ್ರೆ ದೃಶ್ಯಗಳನ್ನು ಮೂಡಿಸಿದ್ದಾರೆ.ವಿಶೇಷವೆಂದರೆ ಮುಂದಿನ ದಿನದಲ್ಲಿ ಈ ಟೀಸರ್ ನಲ್ಲಿ ತೋರಿಸಿದಂತಹಾ ದೃಶ್ಯಗಳನ್ನೇ ಹೊರಾಂಗಣ ಚಿತ್ರೀಕರಣದಲ್ಲಿ ಶೂಟ್ ಮಾಡಲಾಗುವುದು.
ಚಿತ್ರದಲ್ಲಿ ಪ್ರಮುಖವಾಗಿ ನಾಯಕ, ನಾಯಕಿಯರಷ್ಟೇ ಅಲ್ಲದೆ 5,000 ಜೂನಿಯರ್ ಕಲಾವಿದರು, ಮತ್ತು ಒಂದು ಆನೆ ಸಹ ಅಭಿನಯಿಸುತ್ತಿದೆ.
ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಮುಂದಿನ ಮೇ ವೇಳೆಗೆ ಪ್ರಾರಂಭವಾಗಲಿದೆ. ಇದಕ್ಕೆ ಮುನ್ನ ಶ್ರೀಮುರಳಿಯ "ಭರಾಟೆ" ಚಿತ್ರದ ಚಿತ್ರೀಕರಣ ಮುಕ್ತಾಯ ಕಾಣುವ ನಿರೀಕ್ಷೆ ಇದೆ.ಏತನ್ಮಧ್ಯೆ ಚಿತ್ರತಂಡ ಚಿತ್ರದ ನಾಯಕಿ ಹಾಗೂ ಇತರೆ ಪಾತ್ರಗಳಿಗೆ ನಟ ನಟಿಯರ ಆಯ್ಕೆ ನಡೆಸುತ್ತಿದೆ.