ವೈಶಾಲಿ ಕಸವರಹಳ್ಳಿಗೆ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮಂಜು 12 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಮಂಜು ಐದು ವರ್ಷಗಳ ಕಾಲ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. "ಕಿರು ಮಿಂಕಣಜ" ಮಂಜು ಅವರ ಚೊಚ್ಚಲ ನಿರ್ದೇಶನದ ಚಿತ್ರ.. "ಧಾರಾವಾಹಿ ನಿರ್ದೇಶಕರಾದ ದರ್ಶಿತ್ ಭಟ್ ಅವರನ್ನು ನನ್ನ ಮಾರ್ಗದರ್ಶಕರನ್ನಾಗಿ ಭಾವಿಸಿದ್ದೇನೆ.ಅವರು ನಿರ್ದೇಶಕರಾಗಲು ನನಗೆ ಮಾರ್ಗದರ್ಶನ ನೀಡಿದ್ದಾರೆ" ಎಂದು ಮಂಜು ಹೇಳಿದರು. ಜನಾರ್ದನ್ ಆರ್ದೌಡಿ ನಿರ್ಮಿಸಿದ ಈ ಚಿತ್ರದಲ್ಲಿ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿದೆ.ಅವರಲ್ಲಿ ರವಿಚಂದ್ರ ವಿ ಮತ್ತು ಅರ್ಜುನ್ ರಮೇಶ್ (ಧಾರಾವಾಹಿ ಶನಿ ಮತ್ತು ಮಹಾಕಾಳಿ ಖ್ಯಾತಿಯ), ಮತ್ತು ವರ್ಷಿಕಾ ನಾಯಕ್ ಪ್ರಮುಖರಾಗಿದ್ದಾರೆ.