ದೀಪಲ್ ಈ ಚಿತ್ರದ ಪೋಟೋಗ್ರಾಫಿ ಮಾಡಲಿದ್ದಾರೆ. ಸಂತ್ರಸ್ತೆಯ ಹೆಸರಿಗೆ ಯಾವುದೇ ರೀತಿಯ ಹಾನಿಯಾಗದ ರೀತಿಯಲ್ಲಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಪ್ರಕರಣ ಕುರಿತು ಕುಟುಂಬಸ್ಥರು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಹಾಗೂ ಹೋರಾಟಗಾರರ ಸ್ಪಂದಿಸಿದ ರೀತಿ ಹಾಗೂ ಪೊಲೀಸ್ ತನಿಖೆಯ ಆಯಾಮನ್ನಿಟ್ಟುಕೊಂಡು ಚಿತ್ರವನ್ನು ಮಾಡಲಾಗುತ್ತಿದೆ. ಈ ವರ್ಷದಲ್ಲಿಯೇ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಭೀಮ್ ರಾವ್ ತಿಳಿಸಿದ್ದಾರೆ.