ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿದ್ದರಾಮಯ್ಯ, “ಇದು ಒಂಟಿ ಸಲಗಾನಾ ಅಥವಾ ಹಿಂಡಿನಲ್ಲಿರುತ್ತಾ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು. ಆನೆ ನಡೆದಿದ್ದೇ ದಾರಿಯಾದರೂ, ಒಂಟಿ ಸಲಗ ಭಯ ಮತ್ತು ಆತಂಕದಲ್ಲಿರುವ ಕಾರಣ ತುಂಬಾ ಅಪಾಯಕಾರಿ. ತನ್ನ ರಕ್ಷಣೆಗಾಗಿ ಎದುರಿನವರ ಮೇಲೆರಗುತ್ತದೆ” ಎಂದು ಹೇಳಿದ್ದಾರೆ.
ಅವರ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮದೇ ಪಕ್ಷದ ಕೆಲ ನಾಯಕರು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸೋಲಿಗೂ ಅವರ ಅಹಂ ಮೂಲ ಕಾರಣ ಎನ್ನುತ್ತಿದ್ದಾರೆ. ಅವರೆಲ್ಲರ ಮಧ್ಯೆ ಸಿದ್ದರಾಮಯ್ಯಗೆ ಒಂಟಿ ಎಂಬ ಭಾವನೆ ಮೂಡಿದೆಯೇ? ಒಂಟಿ ಸಲಗ ರೊಚ್ಚಿಗೆದ್ದರೆ ಯಾರನ್ನೂ ಬಿಡೋದಿಲ್ಲ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆಯೇ? ಎಂಬ ಗುಸುಗುಸು ಕೇಳಿಬಂದಿದೆ.