ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ನಾಯಕ ವಿಹಾನ್ ಈಗ ಮಾಲಿವುಡ್ ಪ್ರವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಅವರೇ ನಾಯಕನಾಗಿದ್ದ "ಕಾಲ್ ಕೆಜಿ ಪ್ರೀತಿ" ಚಿತ್ರದ ಮಲಯಾಲಂ ರಿಮೇಕ್ ನಲ್ಲಿ ಈಗ ವಿಹಾನ್ ಕಾಣಿಸಿಕೊಳ್ಲಲಿದ್ದಾರೆ. ಸತ್ಯ ಸೂರ್ಯ ಸಾಗರ್ ಎಂಬ ಹೊಸ ನಿರ್ದೇಶಕ ಮಲಯಾಳಂ ನಲ್ಲಿ ಕನ್ನಡದ ಚಿತ್ರವೊಂದರ ರೀಮೇಕ್ ಗಾಗಿ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ.