ಮುಂದಿನ ಕಮರ್ಷಿಯಲ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ ರಾಜವರ್ಧನ್

ಬಿಚ್ಚುಗತ್ತಿ:ಚಾಪ್ಟರ್ 1 ದಲವಾಯಿ ದಂಗೆ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಈ ಬಾರಿ ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಕುಮರೇಶ್ ಎಂ ನಿರ್ದೇಶನದ ಚಿತ್ರ. ನೂರೊಂದು ನೆನಪು ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಕುಮರೇಶ್ ಗೆ ಇದು ಎರಡನೇ ಚಿತ್ರ.
ರಾಜವರ್ಧನ್
ರಾಜವರ್ಧನ್
Updated on

ಬಿಚ್ಚುಗತ್ತಿ:ಚಾಪ್ಟರ್ 1 ದಲವಾಯಿ ದಂಗೆ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಈ ಬಾರಿ ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಕುಮರೇಶ್ ಎಂ ನಿರ್ದೇಶನದ ಚಿತ್ರ. ನೂರೊಂದು ನೆನಪು ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಕುಮರೇಶ್ ಗೆ ಇದು ಎರಡನೇ ಚಿತ್ರ.

ಇನ್ನೂ ಹೆಸರಿಡದ ಈ ಚಿತ್ರ ಒಂದು ನೈಜ ಘಟನೆಯ ದೊಡ್ಡ ಹಗರಣಕ್ಕೆ ಸಂಬಂಧಿಸಿದ ಚಿತ್ರವಾಗಿದ್ದು ಇದಕ್ಕಾಗಿ ರಾಜವರ್ಧನ್ ತಮ್ಮ ದೇಹದ ಆಕಾರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.

ಪ್ರತಿ ಚಿತ್ರದಲ್ಲಿ ನಾನು ಏನಾದರೊಂದು ಹೊಸದನ್ನು ಮಾಡುತ್ತೇನೆ. ಮಾಸ್ ಆಗಿ ನಾನು ಮುಂದಿನ ಚಿತ್ರದಲ್ಲಿ ಬರಲಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು ಕುಮರೇಶ್ ಅವರು ಕಥೆ ಬರೆದ ರೀತಿ ಇಷ್ಟವಾಗಿದೆ. ಇದರಿಂದ ನನ್ನ ವೃತ್ತಿಗೆ ಬ್ರೇಕ್ ಸಿಗಬಹುದು ಎಂದು ಭಾವಿಸಿದ್ದೇನೆ ಎಂದು ರಾಜವರ್ಧನ್ ಹೇಳುತ್ತಾರೆ.

ಈ ಚಿತ್ರಕ್ಕಾಗಿ ನಾನು ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದೇನೆ, ಅದಕ್ಕಾಗಿ ಬಾಕ್ಸಿಂಗ್ ಅಭ್ಯಾಸ ಮಾಡಿದೆ ಎನ್ನುತ್ತಾರೆ ರಾಜವರ್ಧನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com