ಬೆಂಗಳೂರು: ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಕೆಎಸ್ ಪಿ ಎಲ್ ಸೀಸನ್ 2 ಪ್ರಾರಂಭವಾಗುತ್ತಿದೆ. ಮೂರುದಿನ ನಡೆಯುವ ಈ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದ್ದು, ಐಪಿಎಲ್ ಗೆ ಸರಿಸಮನಾಗಿ ಅದ್ದೂರಿಯಾಗಿ ನಡೆಸಲಾಗುತ್ತದೆ.
ರಾಜ್ಯದ ಪ್ರತಿ ಜಿಲ್ಲೆಗೆ ಒಂದು ಟೀಮ್ ಇದರಲ್ಲಿ ಭಾಗವಹಿಸುತ್ತದೆ. ಈ ಎಲ್ಲ ತಂಡದಲ್ಲಿರುವವರು ಬಾದ್ ಷ ಕಿಚ್ಚ ಸುದೀಪ ರವರ ಅಭಿಮಾನಿಗಳು ಮಾತ್ರ ಎಂಬುದು ವಿಶೇಷ. ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಉತ್ತೇಜನ ಬಹುಮಾನಗಳು ಕೂಡ ಇಲ್ಲಿರುತ್ತದೆ.
ಈ ಸಲದ ಟೂರ್ನಮೆಂಟ್ ಉದ್ಘಾಟನೆ ಮಹಿಳಾ ಅಭಿಮಾನಿಗಳ ಎರಡು ತಂಡದೊಂದಿಗೆ ಆರಂಭ ಪಡೆದರೆ ಅಂತ್ಯದಲ್ಲಿ ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ಕೂಡ ಒಂದು ಜಿದ್ದಾ ಜಿದ್ದಿನ ಪಂದ್ಯ ನಡೆಯಲಿದೆ.
ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಟೂರ್ನಮೆಂಟ್ ಕಿಚ್ಚ ಸುದೀಪ ಸರ್ ಅವರ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ನಂದೀಶ್ ರವರ ಎರಡನೇ ವರ್ಷದ ಸ್ಮರಣಾರ್ಥ ನಡೆಯಲಿದೆ. ಕಿಚ್ಚ ಸುದೀಪ ರವರ ಸಂಸ್ಥೆ "ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್" ಉಸ್ತುವಾರಿ ವಹಿಸಿಕೊಂಡು ಈ ಟೂರ್ನಮೆಂಟ್ ಆಕರ್ಷಕವಾಗಿ, ಶಿಸ್ತುಬದ್ದವಾಗಿ ಮುಖ್ಯವಾಗಿ ಸಾರ್ಥಕ ರೀತಿ ನಡೆಸಿ ಕೊಡಲು ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಗ್ರೌಂಡ್ ನಲ್ಲಿ ಸಿದ್ಧತೆ ಮಾಡಿಕೊಂಡಿದೆ.
Advertisement