“ಇಂಡಿಯಾ ವರ್ಸಸ್ ಇಂಗ್ಲೆಂಡ್” ವರ್ಣಮಾಲೆ ಹಾಡು ಬಿಡುಗಡೆಗೊಳಿಸಿದ ಸುಧಾಮೂರ್ತಿ

ಖ್ಯಾತ ಲೇಖಕ-ನಿರ್ದೇಶಕ, ಸ್ಯಾಂಡಲ್ ವುಡ್ ನಲ್ಲಿ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರದಲ್ಲಿರುವ ವರ್ಣಮಾಲೆಯ ಮೂಲಕ ಕನ್ನಡ ಕಲಿಯುವ ಗೀತೆಯನ್ನು ಇನ್ಫೋಸಿಸ್ ಸುಧಾಮೂರ್ತಿ ಅವರು ಇತ್ತೀಚೆಗೆ ಲೋಕಾರ್ಪಣೆ  ಮಾಡಿದರು.
ಸುಧಾ ಮೂರ್ತಿ
ಸುಧಾ ಮೂರ್ತಿ
Updated on

ಬೆಂಗಳೂರು: ಖ್ಯಾತ ಲೇಖಕ-ನಿರ್ದೇಶಕ, ಸ್ಯಾಂಡಲ್ ವುಡ್ ನಲ್ಲಿ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರದಲ್ಲಿರುವ ವರ್ಣಮಾಲೆಯ ಮೂಲಕ ಕನ್ನಡ ಕಲಿಯುವ ಗೀತೆಯನ್ನು ಇನ್ಫೋಸಿಸ್ ಸುಧಾಮೂರ್ತಿ ಅವರು ಇತ್ತೀಚೆಗೆ ಲೋಕಾರ್ಪಣೆ  ಮಾಡಿದರು.
  
ವಿಶ್ವದ ಎಲ್ಲಾ ಕನ್ನಡ ಕಂದಮ್ಮಗಳಿಗೆ ಅರ್ಪಿಸಲಾಗಿರುವ ಈ ಗೀತೆಯನ್ನು ಸುಮಲತಾ ಅಂಬರೀಷ್ ಅವರ ಪಾತ್ರದ ಮೇಲೆ ಇಂಗ್ಲೆಂಡ್ನಲ್ಲಿ ಚಿತ್ರೀಕರಿಸಲಾಗಿದೆ. ಮತ್ತೂರು ನಂದಕುಮಾರ್ ಅವರು ರಚಿಸಿರುವ ಈ ಗೀತೆಯನ್ನು ಇಂದು ನಾಗರಾಜ್ ಹಾಡಿದ್ದು ಅರ್ಜುನ್ ಜನ್ಯ ರಾಗ ಸಂಯೋಜಿಸಿದ್ದಾರೆ. 
  
ವಿಶ್ವದ ಎಲ್ಲಾ ಕನ್ನಡ ಸಂಘಟನೆಗಳು ಈ ಗೀತೆಯನ್ನು ಬಳಸಿಕೊಳ್ಳಲು ಉತ್ಸುಕವಾಗಿವೆ. ತೆರೆಯ ಮೇಲೆ ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಅನಂತನಾಗ್, ಸಾಧುಕೋಕಿಲ,ಪ್ರಕಾಶ್ ಬೆಳವಾಡಿ, ಶಿವಮಣಿ, ಗಿರಿರಾಜ್ ಮತ್ತು ಹಲವು ಬ್ರಿಟಿಷ್ ಕಲಾವಿದರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com