'ಗ್ರಾಮಾಯಣ' ಚಿತ್ರ ನಿರ್ಮಾಪಕ ಎನ್‌ಎಲ್‌ಎನ್ ಮೂರ್ತಿ ನಿಧನ

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ "ಗ್ರಾಮಾಯಣ" ಚಿತ್ರದ ನಿರ್ಮಾಪಕ ಎನ್.ಎಲ್.ಎನ್. ಮೂರ್ತಿ(39 ) ನಿಧನರಾಗಿದ್ದಾರೆ. 
ಎನ್‌ಎಲ್‌ಎನ್ ಮೂರ್ತಿ
ಎನ್‌ಎಲ್‌ಎನ್ ಮೂರ್ತಿ

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ "ಗ್ರಾಮಾಯಣ" ಚಿತ್ರದ ನಿರ್ಮಾಪಕ ಎನ್.ಎಲ್.ಎನ್. ಮೂರ್ತಿ(39 ) ನಿಧನರಾಗಿದ್ದಾರೆ. 

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಇನ್ನು ಮೃತರ ತಾಯಿ ಸಹ ಗುರುವಾರವಷ್ಟೇ ನಿಧನರಾಗಿದ್ದು ಮೃತ ಮೂರ್ತಿ ಪತ್ನಿ, ಪುತ್ರ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.

ವಿನಯ್ ರಾಜ್ ಕುಮಾರ್ ಅವರ "ಗ್ರಾಮಾಯಣ" ಚಿತ್ರ ನಿರ್ಮಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ಮೂರ್ತಿ ತಾವು ಮೊದಲ ಚಿತ್ರದ ಬಿಡುಗಡೆಗೂ ಮುನ್ನ ಸಾವಿನ ಮನೆಯ ಕದ ತಟ್ಟಿದ್ದಾರೆ. 

ಮೂರ್ತಿಯವರ ಕೊರೋನಾ ವರದಿ ಬಂದ ನಂತರ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಬನಶಂಕರಿಯ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.

ನಿರ್ಮಾಪಕ ಮೂರ್ತಿ ನಿಧನಕ್ಕೆ ನಟ ವಿನಯ್ ರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ. "ಒಳ್ಳೇ ಚಿತ್ರ ನಿರ್ಮಾಣದ ಕನಸು ಕಂಡಿದ್ದ ಮೂರ್ತಿಯವರ ಅಕಾಲಿಕ ಸಾವು ದುಃಖತಂದಿದೆ" ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com