ನನ್ನನ್ನು ಬೆದರಿಸುತ್ತಿದ್ದಾರೆ;  ಸಂಗೀತ ನಿರ್ದೇಶಕ ಇಳಯರಾಜ ಪೊಲೀಸರಿಗೆ ದೂರು

ಭಾರತೀಯ  ಚಿತ್ರರಂಗದ   ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ  ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ  ಇಳಯರಾಜ  ಪೊಲೀಸರಿಗೆ  ದೂರು ನೀಡಿದ್ದಾರೆ.
ಸಂಗೀತ ನಿರ್ದೇಶಕ ಇಳಯರಾಜ
ಸಂಗೀತ ನಿರ್ದೇಶಕ ಇಳಯರಾಜ
Updated on

ಚೆನ್ನೈ: ಭಾರತೀಯ  ಚಿತ್ರರಂಗದ   ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ  ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ  ಇಳಯರಾಜ  ಪೊಲೀಸರಿಗೆ  ದೂರು ನೀಡಿದ್ದಾರೆ.

ಸಾಯಿ  ಪ್ರಸಾದ್  ಹಾಗೂ  ಆತನ ಜನರು   ತಮಗೆ ಬೆದರಿಕೆ ಹಾಕುತ್ತಿದ್ದಾರೆ.  ಈ ಮೂಲಕ  ತಮ್ಮ  ಸ್ಟುಡಿಯೋ ಕೊಠಡಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ಈ  ಸಂಬಂಧ  ಅವರ  ವ್ಯವಸ್ಥಾಪಕ   ಜಾಫರ್   ಪೊಲೀಸರಿಗೆ  ದೂರು ನೀಡಿದ್ದಾರೆ. 

ಪ್ರಸಾದ್ ಸ್ಟುಡಿಯೊದಲ್ಲಿನ  ತಮ್ಮ  ಕೊಠಡಿಗೆ  ಪ್ರವೇಶಿಸಿ  ಹಲವಾರು  ಸಂಗೀತ  ವಾದ್ಯಗಳು, ನೋಟ್ಸ್ ಗಳು ಹಾಗೂ ಇತರ ಉಪಕರಣ ನಾಶಪಡಿಸಿದ್ದಾರೆ ಎಂದು  ಚೆನ್ನೈ ಪೊಲೀಸ್  ಕಮೀಷನರ್ ಗೆ   ನೀಡಿರುವ  ದೂರಿನಲ್ಲಿ  ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com