ಜಗ್ಗೇಶ್ -ಗುರುಪ್ರಸಾದ್ ಕಾಂಬಿನೇಶನ್​ನ ರಂಗನಾಯಕ ಏಪ್ರಿಲ್ 2ರಿಂದ ಶೂಟಿಂಗ್ ಆರಂಭ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.
ಜಗ್ಗೇಶ್ ಮತ್ತು ಗುರು ಪ್ರಸಾದ್
ಜಗ್ಗೇಶ್ ಮತ್ತು ಗುರು ಪ್ರಸಾದ್
Updated on

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.

ರಂಗನಾಯಕ’ ಚಿತ್ರದ ಕುರಿತು ಮಾಹಿತಿ ನೀಡುವ ವಿಖ್ಯಾತ್, ‘ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ಜತೆಯಾಟದಲ್ಲಿ ಈ ಹಿಂದೆ ಬಂದಿದ್ದ ಎರಡು ಚಿತ್ರಗಳಿಗೂ, ‘ರಂಗನಾಯಕ’ ಚಿತ್ರಕ್ಕೂ ಬಹಳ ವ್ಯತ್ಯಾಸ ಇದೆ. ಈ ಚಿತ್ರದ ಕಥೆ 90ರ ದಶಕದಲ್ಲಿ ನಡೆಯಲಿದ್ದು, ಬಹುತೇಕ ಚಿತ್ರೀಕರಣ ಸೆಟ್​ನಲ್ಲೇ ನಡೆಯಲಿದೆ.

ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾಗಿದ್ದ ‘ಪುಷ್ಪಕ ವಿಮಾನ’ಚಿತ್ರಕ್ಕೆ ಕುಂಬಳಗೋಡಿನ ಬಳಿ ಸೆಟ್ ಹಾಕಿದ್ದೆವು. ಅದೊಂದು ರೀತಿಯಲ್ಲಿ ನಮಗೆ ಲಕ್ಕಿ. ಈಗಲೂ ಅಲ್ಲಿಯೇ ಸೆಟ್ ಹಾಕಲು ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ದಾರೆ,.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com