ಬುಲೆಟ್ ಪ್ರಕಾಶ್ ಇರಲಿ, ಇಲ್ಲದಿರಲಿ ಎಂದಿಗೂ ನನ್ನ ಗೆಳೆಯನೇ, ನಿಮಗೆ ನಾನಿದ್ದೇನೆ: ಕುಟುಂಬಕ್ಕೆ ದರ್ಶನ್ ಅಭಯ
ಬೆಂಗಳೂರು: ಇವತ್ತಿಗೆ ಬುಲೆಟ್ ಪ್ರಕಾಶ್ ನನ್ನ ಗೆಳೆಯನಿರದಿರಬಹುದು ಆದರೆ ಒಂದಾನೊಂದು ಕಾಲದಲ್ಲಿ ನನ್ನ ಕುಚುಕು ಗೆಳೆಯನಾಗಿದ್ದು ಆತನ ಕುಟುಂಬಕ್ಕೆ ನಾನಿದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಯ ನೀಡಿದ್ದಾರೆ.
ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ನಿನ್ನೆ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 44 ವರ್ಷಕ್ಕೆ ಬುಲೆಟ್ ಪ್ರಕಾಶ್ ಇಹ ಲೋಕ ತ್ಯಜಿಸಿದ್ದು ನೋವಿನ ವಿಷಯವಾಗಿತ್ತು.
ಇನ್ನು ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಕಲಾಸಿಪಾಳ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಆಪ್ತ ಸ್ನೇಹಿತರಾಗಿದ್ದರು. ಆದರೆ ಕೆಲ ವರ್ಷಗಳಿಂದ ಕೆಲ ಭಿನ್ನಾಭಿಪ್ರಾಯದಿಂದಾಗಿ ಇಬ್ಬರು ದೂರವಾಗಿದ್ದರು.
ಇದೀಗ ದರ್ಶನ್ ಅವರ ಈಗ ನನ್ನ ಗೆಳೆಯಾನೊ ಅಲ್ವೋ... ಆದರೆ ಒಂದು ಕಾಲದ ಗೆಳೆಯ ಯಾರು ಕೊಟ್ರೂ ಬಿಟ್ರೂ ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ದರ್ಶನ್ ಮಾತು. ಅಭಯ. ಹಾಸ್ಯನಟ ಬುಲೆಟ್ ಪ್ರಕಾಶ್ ಸಿನಿ ಪಯಣ ನಿಲ್ಲಿಸಿದ್ದಾರೆ. ಹಾಸ್ಯದ ನೆನಪೊಂದನ್ನು ಬಿಟ್ಟು ಅಗಲಿದ್ದಾರೆ ಎಂದು ದರ್ಶನ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ