ಚಿತ್ರದುರ್ಗದ ಒಂದೊಂದು ಕಲ್ಲೂ ಇತಿಹಾಸವನ್ನು ಸಾರುತ್ತವೆ ಎಂಬ ಮಾತಿದೆ ಅಂತೆಯೇ ಅಲ್ಲಿನ ಪಾಳೇಗಾರರ ಕುರಿತು ಹಲವು ಕಥೆ, ಕಾದಂಬರಿಗಳು ಪ್ರಕಟವಾಗಿದ್ದು, ಬಿ ಎಲ್ ವೇಣು ಅವರ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ
‘ಅಲೆಮಾರಿ’ ಸಂತು ಎಂದೇ ಹೆಸರಾಗಿರುವ ಹರಿ ಸಂತೋಷ್ ನಿರ್ದೇಶನದಲ್ಲಿ ಸಿದ್ಧವಾಗಿರುವ ಚಿತ್ರದಲ್ಲಿ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿ, ಜನಪ್ರಿಯ ನಟಿ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ ಬಾಹುಬಲಿ ಖ್ಯಾತಿಯ ಪ್ರಭಾಕರ್ ವಿಶಿಷ್ಟ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
Advertisement