'ಮದಗಜ' ಸೆಟ್ ಗೆ 'ಡಿ ಬಾಸ್' ದರ್ಶನ್ ಎಂಟ್ರಿ, 'ಸಖತ್ ಟೈಂ' ಎಂದ ಶ್ರೀಮುರಳಿ

ಮಹೇಶ್ ನಿರ್ದೇಶನದ ಶ್ರೀಮುರಳಿ ಅಭಿನಯದ "ಮದಗಜ" ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆದಿದೆ. ಈ ವೇಳೆ ಯಾರೊಬ್ಬರಿಗೂ ಸುಳಿವು ನೀಡದೆ ಡಿ ಬಾಸ್ ದರ್ಶನ್ "ಮದಗಜ" ಶೂಟಿಂಗ್ ಸೆಟ್ ಗೆ ಎಂಟ್ರಿಯಾಗಿದ್ದಾರೆ.
'ಮದಗಜ' ಸೆಟ್ ಗೆ 'ಡಿ ಬಾಸ್' ದರ್ಶನ್ ಎಂಟ್ರಿ, 'ಸಖತ್ ಟೈಂ' ಎಂದ ಶ್ರೀಮುರಳಿ

ಮಹೇಶ್ ನಿರ್ದೇಶನದ ಶ್ರೀಮುರಳಿ ಅಭಿನಯದ "ಮದಗಜ" ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆದಿದೆ. ಈ ವೇಳೆ ಯಾರೊಬ್ಬರಿಗೂ ಸುಳಿವು ನೀಡದೆ ಡಿ ಬಾಸ್ ದರ್ಶನ್ "ಮದಗಜ" ಶೂಟಿಂಗ್ ಸೆಟ್ ಗೆ ಎಂಟ್ರಿಯಾಗಿದ್ದಾರೆ.

ಈ ಸಮಯ ಚಿತ್ರತಂಡದ ಸದಸ್ಯರು ದರ್ಶನ್ ಜತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ.

ಇನ್ನು ನಟ ಶ್ರೀಮುರಳಿ ಸಹ ದರ್ಶನ್ ಆಗಮನವನ್ನು ಸಂಭ್ರಮಿಸಿದ್ದು ಈ ಬಗ್ಗೆ ತಮ್ಮ ಟ್ವಿಟ್ತರ್ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.ಇದು  'ಸಖತ್ ಟೈಂ' ಎಂದು ನಟ ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ. 

"ಮದಗಜ"ದಲ್ಲಿ ಶ್ರೀಮುರಳೀಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು ದರ್ಶನ್ ಅವರ "ರಾಬರ್ಟ್" ಚಿತ್ರ ನಿರ್ಮಾಪಕ ಉಮಾಪತಿ ಡ್ರೀನಿವಾಸ್ ಗೌಡ ಈ ಚಿತ್ರಕ್ಕೆ ಸಹ ಬಂಡವಾಳ ತೊಡಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com